ಬಸವಾದಿ ಶರಣರು ಯಾವುದೇ ಜಾತಿಗೆ ಸೀಮಿತವಲ್ಲ; ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿ

0
57

ಕಲಬುರಗಿ: ಚಿತ್ತಾಪೂರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ‘ನಡಗಟ್ಟಿ ಬಸವ ಸಮಿತಿ’ ನೇತೃತ್ವದಲ್ಲಿ ಇಂದು ಕಲಬುರಗಿ ತಾಲೂಕಿನ ಫರಹತಾಬಾದ ಬಸ್ ನಿಲ್ದಾಣದಿಂದ ನಾಡ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಸೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಲಾಯಿತು.

ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಹಾಗರಗುಂಡಗಿ ಮತ್ತು ಕಲಬುರಗಿ ಗಾಜಿಪೂರ ಗದ್ದುಗೆ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಬಸವಾದಿ ಶರಣರ ಪ್ರತಿಮೆಗಳಿಗೆ ನಿರಂತರ ಅಪಮಾನ ಮಾಡಲಾಗುತ್ತಿದೆ. ಇದು ಇಲ್ಲಿಗೆ ನಿಲ್ಲಬೇಕು. ಇಂತಹ ಮಹಾನ್ ನಾಯಕರು ಯಾವುದೇ ಒಂದು ಜಾತಿಗೆ ಸೇರಿದವರಲ್ಲ, ಅವರು ಇಡೀ ಮಾನವಕುಲದ ವಿಮೋಚಕರು. ಹಾಗಾಗಿ ಪೆÇಲೀಸ್ ಇಲಾಖೆ ಇಂಥ ವಿಕೃತ ಮನಸ್ಸಿನ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಡಾ. ಶಿವಕುಮಾರ ಶರ್ಮಾ, ಮಲ್ಲಿಕಾರ್ಜುನ ಎಸ್ ಅವಂಟಗಿ, ನಾಗೇಂದ್ರಪ್ಪ ನಿಂಬರಗಿ, ಕೇಶವ ಮೋಟಗಿ, ಸುರೇಶ್ ತಿಬಶಟ್ಟಿ, ಬಸವಶಟ್ಟಿ ಮಹಾಶಟ್ಟಿ ಮಾತನಾಡಿದರು.

ಗ್ರಾಮದ ಪ್ರಮುಖರಾದ ಶರಣಬಸಪ್ಪ ಸಿ ಸಜ್ಜನ್, ರವೀಂದ್ರ ಹಾಲಕಾಯಿ, ಸಾಗರ ಅಂಗಡಿ, ಶರಣು ಕೆ ಸಜ್ಜನ್, ರಾಜಶೇಖರ್ ನೆಲೋಗಿ, ಲಕ್ಷ್ಮಿಕಾಂತ್ ಪತ್ತಾರ್, ಶಂಕರ್ ಪವಾರ್, ರಾಜಶೇಖರ್ ಗುಡೂರ, ಶಿವಾನಂದ ಮೈಂದರ್ಗಿ, ವೀರೇಶ್ ನಾಸಿ, ಪ್ರಭುದೇವ ಹೊಸಮನಿ, ಮಾಳಪ್ಪ ಪೂಜಾರಿ, ಅಣವೀರ(ಮೇಘಾ), ಸಿದ್ದು ತಳವಾರ, ಈಶ್ವರಾಜ ಬಾಳಿ, ಶರಣು ಸುಬೇದಾರ್, ಶಿವಯೋಗಿ ಪೂಜಾರಿ ಸೇರಿದಂತೆ ನೂರಾರು ಬಸವಾಭಿಮಾನಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here