ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಮಾವೇಶ

0
33

ಕಲಬುರಗಿ: ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಗಾಂಧಿ ಸ್ಮೃತಿ ಹಾಗೂ ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮವನ್ನು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಾಬಳಗಾಂವ ರವರು ವಹಿಸಿದ್ದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪೆÇ್ರೀ. ನರೇಂದ್ರ ಬಡಶೇಷಿ ರವರು ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸತೀಶ್ ಸುವರ್ಣ, ದೀಪಕ್ ಫಾದರ್ ಥೋಮಸ್, ಡಾ.ಸದಾನಂದ ಪೆರ್ಲ, ಗುರುಬಸಪ್ಪ ಸಜ್ಜನ್ ಶೆಟ್ಟಿ, ಸುರೇಂದ್ರ ಪ್ರಭಂಧಕರು ಎಲ್‍ಐಸಿ,ರವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರಾಸ್ತಾವಿಕ ಮಾತು ಮಾನ್ಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ರವರು ಮಾತಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯದಲ್ಲಿ 36 ಜಿಲ್ಲಾ ವೇದಿಕೆಗಳನ್ನು ಸ್ಥಾಪಿಸಿ 10,000 ಕ್ಕೂ ಮಿಕ್ಕಿದ ಸ್ವಯಂಸೇವಕರ ಮುಖಂಡತ್ವದಲ್ಲಿ 1,20,000 ಕ್ಕೂ ಹೆಚ್ಚಿನ ವ್ಯಸನಿಗಳನ್ನು ಮದ್ಯವರ್ಜನ ಶಿಬಿರಗಳ ಮೂಲಕ ಮನಃಪರಿವರ್ತನೆಗೊಳಿಸಿ ನೆಮ್ಮದಿಯಿಂದ ಬದುಕಲು ಕಾರಣೀಭೂತವಾಗಿದೆ. ಸ್ವಚ್ಚ ,ಸ್ವಸ್ಥ ಸಮಾಜ ನಿರ್ಮಾಣದ ಜೊತೆಗೆ ದುಶ್ಚಟಮುಕ್ತ ಮತ್ತು ದ್ವೇಷಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವಲ್ಲಿ ಸತತ 40 ವರ್ಷಗಳಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ.

ಉದ್ಘಾಟನೆ ಮಾಡಿದಜಯಂತ ಪೂಜಾರಿ ಪ್ರಾದೇಶಿಕ ನಿರ್ದೇಶಕರು ಮಾತಾಡಿ, ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ಈ ಭಾಗದಲ್ಲಿ ಬಿತ್ತರಿಸುವಲ್ಲಿ ಪರಮಪೂಜ್ಯ ಡಾ.ಡಿ ವಿರೇಂದ್ರ ಹೆಗ್ಗಡೆಯವರು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಅದರಂತೆ ಈ ಸಮಾಜದಲ್ಲಿ ಇರುವ ಕಂಟಕ ದುಶ್ಚಟ ದುರಭ್ಯಾಸ ಗಳಿಂದ ಬಳಲುವ ಅದೇಷ್ಟೋ ಕುಟುಂಬಗಳಿಗೆ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರು ದಾರಿ ದೀಪ ಆಗಬೇಕೆಂದೇ ಇಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ರಾಜ್ಯಾದ್ಯಂತ ಕ್ಷೇತ್ರದ ಮೂಲಕ ಜನರಲ್ಲಿ ಯಾವ ರೀತಿಯ ಜಾಗೃತಿ ಮೂಡಿಸಬಹುದೆಂದು ಮನನೊಂದು ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ವಿಶೇಷವಾಗಿ ಅಕ್ಟೋಬರ್ ತಿಂಗಳಲ್ಲಿ ಗಾಂಧೀಜಿ ಯವರು ಕಂಡ ಕನಸನ್ನು ನನಸು ಮಾಡುವ ಸಲುವಾಗಿ ಇಂತಹ ದುಶ್ಚಟಮುಕ್ತ ಸಮಾಜ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಮಾಶಾಸನ ವಿತರಣೆ ಮಾಡಿ ಶ್ರೀಯುತರು ಧರ್ಮಸ್ಥಳದ ಡಾ. ಹೇಮಾವತಿ ವೀ.ಹೆಗ್ಗಡೆಯವರ ಮಾರ್ಗದರ್ಶನದಂತೆ ಈಗಾಗಲೇ ರಾಜ್ಯಾದ್ಯಂತ 16,223 ಮಂದಿ ಅಸಹಾಯಕರಿಗೆ ಪ್ರತಿ ತಿಂಗಳು ರೂ.1,32,99,200 ಮೊತ್ತದ ಮಾಶಾಸನ,1795 ಮಂದಿಗೆ ವಾತ್ಸಲ್ಯ ಮಿಕ್ಸ್ (ಪೌಷ್ಠಿಕ ಆಹಾರ ಆಹಾರಗಳನ್ನು ಒಳಗೊಂಡ ಪ್ಯಾಕ್) 16,743 ಮಂದಿಗೆ ವಾತ್ಸಲ್ಯ ಕಿಟ್, ಚಾಪೆ, ಪಾತ್ರೆ, ತಲೆದಿಂಬು, ಹೊದಿಕೆ, ದಿಂಬು, ಕವರ್, ಸೋಪು, ಸೀರೆ, ಪಾತ್ರೆ ಸಾಮಾಗ್ರಿಗಳು ನೀಡಲಾಗಿದೆ. ಇದರೊಂದಿಗೆ ತೀರಾ ಅಗತ್ಯವುಳ್ಳ 118 ಮಂದಿಗೆ ವಾತ್ಸಲ್ಯ ಮನೆಗಳನ್ನು ಕಟ್ಟಿಕೊಡಲಾಗಿದೆ. ಹೇಮಾವತಿ ವೀ.ಹೆಗ್ಗಡೆಯವರ ಕಲ್ಪನೆಯಂತೆ ಇಂದು ವಾತ್ಸಲ್ಯ ಕಾರ್ಯಕ್ರಮದ ಪ್ರಯೋಜನ ಪಡೆದು ರಾಜ್ಯದ 16,821 ಅಸಹಾಯಕ ಕುಟುಂಬಗಳು ಸಂತೋಷದ ಉಸಿರನ್ನಾಡುತ್ತಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here