ಈಶಾನ್ಯ ಪದವೀಧರ ಚುನಾವಣೆ ಮತದಾರ ನೊಂದಣಿ ಸಭೆ

0
7

ಸುರಪುರ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುರಪುರ ಮಂಡಲ ವತಿಯಿಂದ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಭಿನ್ನಾಡೆ ಅವರ ನೇತೃತ್ವದಲ್ಲಿ ಈಶಾನ್ಯ ಪದವೀಧರರ ನೋಂದಣಿ ಅಭಿಯಾನದ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ಅರುಣ್ ಭಿನ್ನಾಡೆ ಮಾತನಾಡಿ,ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚೆಚ್ಚು ಮತದಾರರ ನೊಂದಣಿ ಮಾಡಿಸಲು ಮುಂದಾಗಬೇಕು,ನೊಂದಣಿ ಸಮಯದಲ್ಲಿ ಅಧಿಕಾರಿಗಳು ಗೊಂದಲ ಮೂಡಿಸುವ ಸಾಧ್ಯತೆ ಇರಲಿದ್ದು ನಮ್ಮ ಮುಖಂಡರು ಮತದಾರರ ಹೆಸರು ನೊಂದಣಿಗೆ ನೆರವಾಗುವಂತೆ ಹಾಗೂ ಈಬಾರಿ ಬಿಜೆಪಿ ಗೆಲುವಿಗೆ ತಾವೆಲ್ಲರು ನಿರಂತರವಾಗಿ ಶ್ರಮಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಯಾದಗಿರಿ ವಿಭಾಗ ಕಾರ್ಯದರ್ಶಿಗಳಾದ ಅಮರನಾಥ ಪಾಟೀಲ್.ನೋಂದಣಿ ಅಭಿಯಾನದ ಜಿಲ್ಲಾ ಸಂಚಾಲಕರಾದ ಎಚ್.ಸಿ ಪಾಟೀಲ್ ರವರು.ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಾ ಹನಮಪ್ಪ ನಾಯಕ. ಸುರೇಶ ಸಜ್ಜನ್.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟರೆಡ್ಡಿ. ಸುರಪುರ ಮಂಡಲ ಅಧ್ಯಕ್ಷರಾದ ಮೆಲಪ್ಪ ಗುಳಗಿ. ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ಮಂಡಲ ಸಂಚಾಲಕರಾದ ಜಗದೀಶ್ ಪಾಟೀಲ್. ಅಭಿಯಾನದ ಸಸಂಚಾಲಕರಾದ ಕೃಷ್ಣರೆಡ್ಡಿ ಇತರರು ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here