ಆಳಂದ: ತಾಲೂಕಿನ ಹೇಬಳಿ ಗ್ರಾಮ ಪಂಚಾಯತಿಯಲ್ಲಿ ವಸತಿ ಯೋಜನೆಗಳ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರ ಆರೋಪ ಖಂಡಿಸಿ ಬಂಜಾರಾ ಕ್ರಾಂತಿದಳ ತಾಲೂಕು ಘಟಕ ವತಿಯಿಂದ ಪಟ್ಟಣದ ತಾಲೂಕು ಪಂಚಾಯತ ಕಚೇರಿ ಎದುರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ಮಾಡಿದರು.
ಬಂಜಾರ ಕ್ರಾಂತಿಗಳ ತಾಲೂಕು ಅಧ್ಯಕ್ಷ ವೆಂಕಟೇಶ್ ಪಿ ರಾಥೋಡ್ ಮಾತನಾಡಿ,ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾಗರ್ ಲಕ್ಷ್ಮಣ್ ರಾಠೋಡ್ ಸಂತೋಷ್ ಅಮರ್ ಸಿಂಗ್ ಚೌಹಾನ್ ಅಶೋಕ್ ಲಿಂಬಾಜಿ ಚೌಹಾನ್ ಅಂಕುಶ ಚವಾಣ್ ರವಿ ರಾಠೋಡ್ ಕುಮಾರ್ ಲಕ್ಷ್ಮಣ್ ರಾಥೋಡ್,ಆಕಾಶ ಮೇಘನಾಥ ರಾಥೋಡ್, ಸಾಗರ್ ದತ್ತು ಪವಾರ್ ಮಿಥುನ್,ಕನಿರಾಮ ರಾಥೋಡ್ ಮತ್ತಿತರರು ಇದ್ದರು.