ಕಲಬುರಗಿ: ನಗರದ ಜ್ಞಾನಗಂಗಾ ಮತ್ತು ಲಕ್ಷ್ಮೀ ನಗರ ಬಡಾವಣೆಗೆ ನೀರು, ಚರಂಡಿ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಅಹಿಂದ ಚಿಂತಕರ ವೇದಿಕೆ ನೆತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳಲಾಯಿತು.
ವೇದಿಕೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಸೈಬಣ್ಣ ಜಮಾದಾರ, ಮುಖಂಡರಾದ ರಮೇಶ ಹಡಪದ, ಯಶ್ವಂತರಾವ, ಸೋಮಾನ ಮಠಪತಿ, ವಿಜಯ ಜಾಧವ, ಪ್ರಕಾಶ, ಸೋಮನಾಥ ಪಾಟೀಲ ಸೇರಿದಂತೆ ಬಡಾವಣೆಯ ನಾಗರಿಕರು ಭಾಗಹಿಸಿದ್ದರು.