ಶ್ರೀ ಹಾಥಿರಾಮ ಬಾವಾಜಿ ರವರ 494ನೇ ಪುಣ್ಯ ತಿಥಿ ಆಚರಣೆ

0
193

ಕಲಬುರಗಿ: ನಗರದ ಬಂಜಾರಾ ಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರಾ (ಲಂಬಾಣಿ) ಸೇವಾ ಸಂಘ ಜಿಲ್ಲಾ ಘಟಕ ವತಿಯಿಂದ ಶ್ರೀ ಹಾಥಿರಾಮ ಬಾವಾಜಿ ರವರ 494ನೇ ಪುಣ್ಯ ತಿಥಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶಕುಂತಲಾ ದೇವಲಾ ನಾಯಕ ಇವರನ್ನು ಸನ್ಮಾನಿಸಲಾಯಿತು. ಹಾಗೂ ನೂತನವಾಗಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸಂಘದ ಸಂಘಟನಾ ಕಾರ್ಯದರ್ಶಿಗಳಾಗಿ ಗಣಪತಿ ರಾಠೋಡ, ವಸಂತ ಚವಾಣ್ ಇವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಈಶ್ವರ ಗೋಪಾಲ ರಾಠೋಡ ಇವರನ್ನುಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ ಬಿ ನಾಯಕ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ವಿಠ್ಠಲ ಜಾಧವ, ರಾಜ್ಯ ಕಾರ್ಯಕಾರಣಿ ಸದಸ್ಯ ರಾಮಚಂದ್ರ ಜಿ ಜಾಧವ, ವಲಯ ಅಧ್ಯಕ್ಷ ಪ್ರೇಮ ಕುಮಾರ ರಾಠೋಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸುಶೀಲಾ ಬಾಯಿ, ಮಾಹಾ ನಗರ ಸಭೆ ಸದಸ್ಯೆ ಲತಾ ರವಿ ರಾಠೋಡ, ಪ್ರಧಾನ ಕಾರ್ಯದರ್ಶಿ ಸುರೇಶ ಜಾಧವ, ಲಕ್ಷ್ಮಣ ಚವಾಣ್, ಆನಂದ ಚಿಂಚೋಳಿಕರ ಹಾಗೂ ಇನ್ನಿತರು ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here