ಕೆಇಎ ಪ್ರಕರಣದಲ್ಲಿ ಕರ್ತವ್ಯಲೋಪ: ಸಿಪಿಐ ಅಮಾನತು

0
66

ಕಲಬುರಗಿ: ಆರೋಪಿ ಆರ್.ಡಿ ಪಾಟೀಲ್ ಬಂಧನ ಕುರಿತಂತೆ ಕಲಬುರಗಿ ಐಜಿಪಿ ಅಜಯ ಹಿಲೋರಿ ಅವರು ಅಫಜಲಪುರ ಸಿಪಿಐ ಓರ್ವರಿಗೆ ಅಮಾನತುಗೊಳ್ಳಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಅಫಜಲಪುರ ಸಿಪಿಐ ಪಂಡಿತ ಸಗರ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ. ಕೆಇಎ ಪ್ರಕರಣದ ಪ್ರಮುಖ ಆರೋಪಿ ನವೆಂಬರ್ 7 ರಂದು ಕಲಬುರಗಿ ನಗರದ ಖಾಸಗಿ ಅಪಾಟ್ಮೆರ್ಂಟ್ ನಲ್ಲಿ ಇದ್ದ ಮಾಹಿತಿ ಇದ್ದರೂ ಕೂಡ ಪಂಡಿತ ಸಗರ ಅವರು ತಡವಾಗಿ ಹೋದ ಕಾರಣ ಆರ್.ಡಿ ಪಾಟೀಲ್ ತಪ್ಪಿಸಿಕೊಂಡು ಹೋಗಿರುತ್ತಾನೆ ಎಂದು ಕರ್ತವ್ಯಲೋಪ ಎಸಗಿದ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಕೆಇಎ ಪರೀಕ್ಷೆಯಲ್ಲಿ ನಡೆದಿರುವ ಆಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here