ಎಪಿಎಮ್‍ಸಿ ಪ್ರಾಂಗಣದಲ್ಲಿನ ಅಂಗಡಿಗಳ ಅಕ್ರಮ ಬಾಡಿಗೆ-ದಲಿತ ಸೇನೆ ಆರೋಪ

0
14

ಸುರಪುರ: ನಗರದ ಕುಂಬಾರಪೇಟ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ಉಪ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿನ ಅಂಗಡಿ ಮಳಿಗೆಗೆಳನ್ನು ಅಧಿಕಾರಿಗಳು ಅಕ್ರಮವಾಗಿ ಬಾಡಿಗೆ ನೀಡಿದ್ದಾರೆ ಎಂದು ದಲಿತ ಸೇನೆ ಸಂಘಟನೆಯಿಂದ ಆರೋಪಿಸಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಗುಡಿಮನಿ ಮಾತನಾಡಿ,ನಗರದ ಕೃಷಿ ಮಾರುಕಟ್ಟೆಗಳ ಪ್ರಾಂಗಣದಲ್ಲಿನ ಅಂಗಡಿ ಮಳಿಗೆಗಳು ಹಾಗೂ ಚಿಕ್ಕ ಮಳಿಗೆಗಳು ನಿಯಮಾನುಸಾರ ಬಾಡಿಗೆ ನೀಡದೆ ಸ್ವಂತಕ್ಕಾಗಿ ಅನಧಿಕೃತವಾಗಿ ಬಾಡಿಗೆ ನೀಡಲಾಗಿದೆ.ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

Contact Your\'s Advertisement; 9902492681

ನಂತರ ಕೃಷಿ ಮಾರುಕಟ್ಟೆ ಉಪ ನಿರ್ದೇಶಕರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹುಲಗಪ್ಪ ದೇವತ್ಕಲ್,ತಾಲೂಕು ಉಪಾಧ್ಯಕ್ಷ ಮಹಾದೇವಪ್ಪ ಚಲುವಾದಿ,ಖಜಾಂಚಿ ಬಸವರಾಜ ಮಂಗಳೂರ,ತೇಜು ಹೊಸಮನಿ,ಕೆಂಭಾವಿ ನಗರಾಧ್ಯಕ್ಷ ಪರಶುರಾಮ ಬೋನಾಳ,ಸಂತೋಷ ಜೈನಾಪುರ,ಭೀಮರಾಯ,ಲೊಕೇಶ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here