ಹೆದ್ದಾರಿ ಮದ್ಯದಲ್ಲಿ ಬೀದಿ ದೀಪಗಳ ಅಳವಡಿಸಲು ನಗರಸಭೆಗೆ ಮನವಿ

0
14

ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಬಳಿಯಿಂದ ಅದಿತಿ ಹೋಟೆಲ್ ವರೆಗೆ ರಾಜ್ಯ ಹೆದ್ದಾರಿಯಾಗಿದ್ದರು ಇಕ್ಕಟ್ಟಾಗಿದ್ದು ರಸ್ತೆ ಬದಿಯಲ್ಲಿ ಅಂಗಡಿಗಳು ಇರುವುದ ರಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ.ಆದ್ದರಿಂದ ಕೂಡಲೇ ನಗರಸಭೆಯಿಂದ ಈ ಹೆದ್ದಾರಿ ಮದ್ಯದಲ್ಲಿ ಬೀದಿ ದೀಪಗಳ ಕಂಬ ಹಾಕಿ ದೀಪ ಅಳವಡಿಸುವುದು ಮತ್ತು ರಸ್ತೆ ಬದಿಯಲ್ಲಿ ಪಾದಾಚಾರಿ ಮಾರ್ಗ ನಿರ್ಮಿಸಬೇಕು ಹಾಗೂ ಅಲ್ಲಲ್ಲಿ ವೇಗದ ಬ್ರೇಕರ್‍ಗಳನ್ನು (ಹಂಪ್ಸ್) ನಿರ್ಮಿಸಿ ಅಪಘಾತಗಳನ್ನು ತಡೆಯುವಂತೆ ಆಗ್ರಹಿಸಿ ನಗರಸಬೆ ಪೌರಾಯುಕ್ತರಿಗೆ ಬರೆದ ಮನವಿಯನ್ನು ನೈರ್ಮಲ್ಯ ನಿರೀಕ್ಷಕ ಶಿವಪುತ್ರ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ,ಶರಣಪ್ಪ ಬೈರಿಮರಡಿ,ಶಿವರಾಜ ವಗ್ಗರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here