ವಾಡಿ ಬಿಜೆಪಿ ಕಛೇರಿಯಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ

0
86

ಕಲಬುರಗಿ: ನವೆಂಬರ್ 26, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ ಎಂದು ಯುವ ಮುಖಂಡ ‌ಆನಂದ ಇಂಗಳಗಿ ಹೇಳಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನ ಆಚರಣೆ ಯಲ್ಲಿ ಮಾತನಾಡುತ್ತಾ 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ನಾವು ಇಂದು ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ.

Contact Your\'s Advertisement; 9902492681

ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆಯಾಗಿದೆ,ನಮ್ಮ ಸಂವಿಧಾನಕ್ಕೆ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ ಎಂದರು.

ಸ್ಥಳೀಯ ಬಿಜೆಪಿ ಅಧ್ಯಕ್ಷ ‌ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ ಮಾತನಾಡಿದರು. ವಿಠಲ ನಾಯಕ, ರಾಮಚಂದ್ರ ರಡ್ಡಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು.

ಈ ಸಂಧರ್ಭದಲ್ಲಿ ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮುಖಂಡರಾದ
ಸಿದ್ದಣ್ಣ ಕಲ್ಲಶೆಟ್ಟಿ,ಗಿರಿಮಲ್ಲಪ್ಪ ಕಟ್ಟೀಮನಿ, ಭೀಮರಾವ ದೊರೆ,ಅರ್ಜುನ ಕಾಳೆಕರ,ಯಮನಪ್ಪ ನವನಳ್ಳಿ, ಕಿಶನ ಜಾಧವ,ಹರಿ ಗಲಾಂಡೆ, ರವೀಂದ್ರ ನಾಯಕ, ರಿಚರ್ಡ್‌ ಮಾರೆಡ್ಡಿ, ಅಯ್ಯಣ್ಣ ದಂಡೋತಿ,ಹೀರಾ ನಾಯಕ,ಬಾಬು ಕುಡಿ,ದತ್ತಾ ಖೈರೆ, ಪ್ರೇಮ ರಾಠೊಡ, ವಿಶ್ವರಾಧ್ಯ ತಳವಾರ, ಮನೀಷ್ ವಾಲಿಯ,ಪ್ರಕಾಶ ಪುಜಾರಿ,ಸಂತೋಷ ಪವಾರ,ಜಯಂತ ಪವಾರ,ಕುಮಾರ ಜಾಧವ,ಚಂದ್ರಶೇಖರ ಬೆಣ್ಣೂರಕರ, ಮಲ್ಲಿಕಾರ್ಜುನ ಸಾತಖೇಡ್, ಬನಶಂಕರ‌ ಮೌಸ್ತರ ಮಹಿಳಾ ಮೂರ್ಚಾದ ಯಂಕಮ್ಮ ಗೌಡಗಾಂವ, ಅನ್ನಪೂರ್ಣ ದೊಡ್ಡಮನಿ,ನಿರ್ಮಲ ಇಂಡಿ,ಶರಣಮ್ಮ ಯಾದಗಿರಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here