ಕಲಬುರಗಿ; ನೆಹರು ಗಂಜ್ನ ನಗರೇಶ್ವರ ಶಾಲೆಯಿಂದ ನಗರದ ವೀರಶೈವ ಕಲ್ಯಾಣ ಮಂಟಪದ ವರೆಗೆ ಶ್ರೀ ಶರಣ ಹೂಗಾರ ಮಾದಯ್ಯನವರ ಭವ್ಯ ಮೆರಣಿಗೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.
ಜಿಲ್ಲಾ ಅಖಂಡ ಕರ್ನಾಟಕ ಹೂಗಾರ ಸಮಾಜದ ಎಲ್ಲಾ ತಾಲೂಕ ಹೂಗಾರ ಸಮಾಜದ ವತಿಯಿಂದ ಹಮ್ಮಿಕೋಡಿದ್ದ ಕಾಯಕಯೋಗಿ ಶ್ರೀ ಶರಣ ಹೂಗಾರ ಮಾದಯ್ಯನವರ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಉದ್ಘಾಟಿಸಿದರು.
ಶ್ರೀ ಗುರು ರಾಜೇಂದ್ರ ಶಿವಯೋಗಿಗಳು, ಜಿಲ್ಲಾ ಅಧ್ಯಕ್ಷ ಪ್ರಕಾಶ ಫುಲಾರಿ, ಶಿವಶರಣಪ್ಪ ಹೂಗಾರ, ಶಿವರಾಜ ಪಾಟೀಲ ಆರ್, ಬನ್ನಪ್ಪ ಪೂಜಾರಿ, ಅರುಣ ಹೂಗಾರ, ವೀರಣ್ಣಾ ಪಾಟೀಲ, ಸಿದ್ದು ಹೂಗಾರ, ಅರುಣಕುಮಾರ ಹೂಗಾರ, ಬಸವರಾಜ ಹೂಗಾರ, ಭಾರತಿ ಹೂಗಾರ, ಸುಭಾಷ ಪೂಜಾರಿ, ಚಂದ್ರಕಾಂತ ಹೂಗಾರ, ಕಲಾವತಿ ಹೂಗಾರ, ಗವಿಸಿದ್ದಪ್ಪ ಹೂಗಾರ ಸೇರಿದಂತೆ ಇತರರು ಇದ್ದರು.