ಕಲಬುರಗಿ: ನಗರದ ಬಿದ್ದಾಪುರ ಕಾಲೊನಿ ನಿವಾಸಿ ಹಾಗೂ ಕೆಬಿಎನ್ ಟೀಮ್ಸ್ ಉರ್ದು ಪತ್ರಿಕೆಯ ಮುದ್ರಣ ವಿಭಾಗದ ಹಿರಿಯ ಮುದ್ರಕ ಶ್ರೀಶೈಲ ನಾಡಗಿರಿ ಅವರು (58) ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ರಕರ್ತ ಸಂತೋಷ ನಾಡಗಿರಿ ಅವರ ಸಹೋದರ. ಮೃತರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ. ಅಂತ್ಯಸಂಸ್ಕಾರ ಬುಧವಾರ (ಡಿ.6) ಮೃತರ ಸ್ವಗ್ರಾಮ ಅಫಜಲಪುರ ತಾಲ್ಲೂಕಿನ ಅರ್ಜುಣಗಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.