ಕಲಬುರಗಿ: ಡಿಸೆಂಬರ್ 9 ಮತ್ತು 10 ರಂದು ಭೋಪಾಲ್ ನಲ್ಲಿ ನಡೆಯಲಿರುವ ಇಜತೆಮ ಸಮ್ಮೇಳನಕ್ಕೆ ಕಲಬುರಗಿಯ ವಾಡಿ ಜಂಕ್ಷನ್ ದಿಂದ ವಿಶೇಷ ರೈಲು ಚಲಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್ ನಲ್ಲಿ ದಿನಾಂಕ 9 ಮತ್ತು 10 ಡಿಸೆಂಬರ್ ರಂದು ಜರುಗಲಿರುವ ವಾರ್ಷಿಕ ಇಜತೆಮ (ಮುಸ್ಲಿಂ ಬಾಂಧವರ ವಾರ್ಷಿಕ ಸಮ್ಮೇಳನ) ಸಲುವಾಗಿ ಸಂಸದ ಡಾ. ಉಮೇಶ್ ಜಾಧವ್ ರವರು ರೈಲ್ವೆ ವತಿಯಿಂದ ಸ್ಪೆಷಲ್ ಟ್ರೈನ್ ನಡೆಸಲು ಆಗ್ರಹಿಸಿದರು.
ಅದರಂತೆಯೇ ಬರುವ ಗುರುವಾರ ದಿನಾಂಕ 7ನೇ ಡಿಸೆಂಬರ್ ರಂದು ಕಲಬುರಗಿ ಜಿಲ್ಲೆಯ ವಾಡಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10:10 ಗಂಟೆ ಈ ಸ್ಪೆಷಲ್ ಟ್ರೈನ್ ಹೊರಡಲಿದೆ ಮತ್ತು ದಿನಾಂಕ 11 ಡಿಸೆಂಬರ್ ರಂದು ರಾತ್ರಿ 11:15 ನಿಮಿಷಕ್ಕೆ ಭೋಪಾಲ್ ದಿಂದ ಹೊರಡಿ ದಿನಾಂಕ 12 ಡಿಸೆಂಬರ್ ರಂದು ಸಾಯಂಕಾಲ 6:00 ಕಲಬುರಗಿ ಜಿಲ್ಲೆಯ ವಾಡಿ ತಲುಪಲಿದೆ ಮತ್ತು ಜಿಲ್ಲೆಯ ಮುಸ್ಲಿಂ ಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಲಬುರಗಿ ಲೋಕಸಭಾ ಸದಸ್ಯರಾದ ಜಾಧವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.