ಕಲಬುರಗಿ: ನ್ಯಾಯವಾದಿ ಓರ್ವನನ್ನು ಬೆನ್ನಟ್ಟಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಶ್ವ ವಿದ್ಯಾಲಯ ಪೊಲೀಸ್ ಬಂಧಿಸಿದ್ದಾರೆ.
ಮಲ್ಲಿನಾಥ್ ಬಸಣ್ಣ (45), ಭಾಗಣ್ಣ ಭಗವಾನ್ ಅವಣಪ್ಪ (20) ಹಾಗೂ ಅವಣಪ್ಪ ಭಾಗವಂತರಾವ್ (48) ಬಂಧಿತ ಆರೋಪಿಗಳು. ಬಂಧಿತರೆಲ್ಲರು ಕಲಬುರಗಿ ತಾಲ್ಲೂಕಿನ ಉದನೂರ್ ನವರಾಗಿದ್ದಾರೆ.
ಗುರುವಾರ ನಗರದ ರಾಮ ಮಂದಿರ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಬರ್ಬರವಾಗಿ ಕೊಲೆ ಮಾಡಿ ಆರೋಪಿಗಳು ತಪ್ಪಿಸಿಕೊಂಡಿದರು.
ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ಇಲಾಖೆಯಿಂದ ಎರಡು ವಿಶೇಷ ತಂಡ ರಚನೆ ಮಾಡಲಾಗಿತ್ತು. ವಿಶ್ವ ವಿದ್ಯಾಲಯ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.