ಡಾ. ಎಂ.ಎಂ. ಕಲಬುರಗಿ ಸಂಸ್ಮರಣೆ ಕಾರ್ಯಕ್ರಮ ನಾಳೆ: ಹುತಾತ್ಮನಿಗೊಂದು ನುಡಿ ನಮನ

0
114

ಕಲಬುರಗಿ: ನಾಡಿನ ಹಿರಿಯ ಸಂಶೋಧಕ, ಖ್ಯಾತ ವಿಚಾರವಾದಿ ಲಿಂ. ಡಾ. ಎಂ.ಎಂ. ಕಲಬುರಗಿ ಅವರ ಸಂಸ್ಮರಣೆ ಕಾರ್ಯಕ್ರಮ ನಗರದ ರಾಜಾಪುರದ ಪಾವನ ಗಂಗಾ ಕಾಲನಿಯಲ್ಲಿ ಸಂಜೆ 6 ಗಂಟೆಗೆ ಜರುಗಲಿದೆ ಎಂದು ಡಾ. ಎಂ.ಎಂ. ಕಲಬುರಗಿ ವಿಚಾರ ವೇದಿಕೆಯ ಮಹಾಂತೇಶ ಕಲ್ಬುರ್ಗಿ ತಿಳಿಸಿದ್ದಾರೆ.

ಬೆಳಗಾವಿಯ ರಾಜ್ಯ ಲೆಕ್ಕಪತ್ರ ಇಲಾಖೆಯ ಅಪರ ನಿರ್ದೇಶಕ ಎಸ್. ದಿವಾಕರ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಪಾಟೀಲ ಅವರು ಡಾ. ಕಲಬುರಗಿ ಅವರ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪಾವನಗಂಗಾ ಕಾಲನಿಯ ಹಿರಿಯರಾದ ಇಂದಿರೇಶ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಟಿ.ವಿ. ಅಡವೇಶ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here