ಡಿಎಸ್‍ಎಸ್ ಜಿಲ್ಲಾ ಮಟ್ಟದ ಸಮಾವೇಶ ಬಿತ್ತಿ ಪತ್ರ ಬಿಡುಗಡೆ

0
15

ಸುರಪುರ: ನಗರದ ಟೈಲರ್ ಮಂಜಿಲ್‍ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಜಿಲ್ಲಾ ಮುಖಂಡರ ಸಭೆಯನ್ನು ನಡೆಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಮಾತನಾಡಿ,ಬರುವ ಜನೆವರಿ 8 ರಂದು ಯಾದಗಿರಿ ನಗರದಲ್ಲಿ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣದ ಅಂಗವಾಗಿ ಜಿಲ್ಲಾ ಮಟ್ಟದ ಜನ ಜಾಗೃತಿ ಸಮಾವೇಶ್ ಹಮ್ಮಿಕೊಳ್ಳಲಾಗಿದೆ,ಸಮಾವೇಶದಲ್ಲಿ ನಮ್ಮ ರಾಜ್ಯ ಸಂಚಾಲಕರಾದ ಡಿ.ಜಿ ಸಾಗರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ಇದೇ ಸಂದರ್ಭದಲ್ಲಿ ಸಮಾವೇಶದ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಮುಖಂಡರಾದ ವಿಭಾಗಿಯ ಸಂಘಟನಾ ಸಂಚಾಲಕ ವೀರಭದ್ರ ತಳವಾರಗೇರ,ಎಮ್.ಪಟೇಲ್,ವಾಸುದೇವ ಕೊಗಿಲಕರ್,ಶೇಖರ ಮಂಗಳೂರ,ಖಾಜಾ ಅಜ್ಮೀರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here