ಜ. 2 ರಿಂದ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ 9ನೇ ರಾಜ್ಯ ಸಮ್ಮೇಳನ

0
9

ರಾಯಚೂರು; ೨೦೨೪ರ ಜನವರಿ ೨೭,೨೮,೨೯ ಈ ಮೂರು ದಿನಗಳ ಕಾಲ ಓರಿಸ್ಸಾದ ಭುವನೇಶ್ವರದಲ್ಲಿ ಜರಗಲಿರುವ ಟಿಯುಸಿಐನ 10ನೇ ಅಖಿಲ ಭಾರತ ಸಮ್ಮೇಳನದ ಪೂರಕವಾಗಿ ಜನವರಿ 2 ಮತ್ತು 3 ರಂದು ರಾಯಚೂರಿನಲ್ಲಿ 9ನೇ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲ ದಿನ ನಗರದಲ್ಲಿ ಬೃಹತ್ ರ‍್ಯಾಲಿ ಮತ್ತು ಬಹಿರಂಗ ಅಧಿವೇಶನ ಜರುಗಲಿದೆ. ೨ನೇ ದಿನ ಜೆಸಿಐ ಭವನದಲ್ಲಿ ಪ್ರತಿನಿಧಿಗಳ ಅಧೀವೇಶನ ನಡೆಯಲಿದೆ. ಬಹಿರಂಗ ಅಧಿವೇಶನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ೯ನೇ ರಾಜ್ಯ ಸಮ್ಮೇಳನವನ್ನು ಸಿಪಿಐ(ಎಂಎಲ್)ರೆಡ್ ಸ್ಟಾರ್‌ನ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ಬೆಂಗಳೂರಿನ ಖ್ಯಾತ ನ್ಯಾಯವಾದಿಗಳು, ಕಾರ್ಮಿಕ ಮುಖಂಡರಾದ ಎಸ್. ಬಾಲನ್, ಕರ್ನಾಟಕ ಶ್ರಮಿಕ ಶಕ್ತಿಯ ವರದ ರಾಜೇಂದ್ರ, ಬಳ್ಳಾರಿಯ ಎಐಟಿಯುಸಿ ಮುಖಂಡರಾದ ಎ.ಆರ್.ಎಂ. ಇಸ್ಮಾಯಿಲ್, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ರುಕ್ಮೀಣಿ, ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ಸಂದೀಪ್ ಬಿ.ಆರ್, ಎಐಕೆಕೆಎಸ್‌ನ ಕಂದೇಗಾಲ ಶ್ರೀನಿವಾಸ ಮೈಸೂರು ಭದ್ರಾವತಿಯ ಸುರೇಶ ಮುಂತಾದವರು ಪಾಲ್ಗೊಂಡು ಮಾತನಾಡಲಿದ್ದಾರೆ. ಟಿಯುಸಿಐ ರಾಜ್ಯಾಧ್ಯಕ್ಷರಾದ ಆರ್.ಮಾನಸಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ದ್ರೋಹಿ ನವ-ಉದಾರವಾದಿ ನೀತಿಗಳ ವಿರುದ್ದ ಬಲಿಷ್ಠ ಕಾರ್ಮಿಕ ಚಳುವಳಿ ಮುನ್ನಡೆಸಿ, ಹಿಂದುತ್ವ ಸರ್ವಾಧಿಕಾರಿ ಫ್ಯಾಸಿಸ್ಟ್ ಆಳ್ವಿಕೆಯ ವಿರುದ್ದ ಪ್ರಭಲ ಸಂಘರ್ಷ ತೀವ್ರಗೊಳಿಸಿ, ರೈತಾಪಿ-ಕಾರ್ಮಿಕರೊಳಗೊಂಡು ವಿಶಾಲ ಜನತೆಯ ಐಕ್ಯತೆಯನ್ನು ಸಾಧಿಸಿಕೊಳ್ಳಲು ಮುಂದಾಗಿ ಎಂಬ ಕರೆಯೊಂದಿಗೆ ೯ನೇ ರಾಜ್ಯ ಸಮ್ಮೇಳನ ಮುನ್ನಡೆಯಲಿದೆ.

ಕೇಂದ್ರದ ಕರಡು ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯ ವರದಿ ಸಮ್ಮೇಳನದಲ್ಲಿ ಮಂಡನೆಗೊಳ್ಳಲಿವೆ. ರಾಜ್ಯದ ೧೧ ಜಿಲ್ಲೆಗಳ ೧೦೦ ಪ್ರತಿನಿಧಿಗಳು ಸಮ್ಮೇಳನದ ಕರಡು ದಸ್ತಾವೇಜುಗಳ ಮೇಲೆ ಸಾಮಾನ್ಯ ಚರ್ಚೆ ಕೈಗೊಳ್ಳಿದ್ದಾರೆ. ಸಮ್ಮೇಳನ ರ‍್ಯಾಲಿಯಲ್ಲಿ ವಿವಿಧ ವೃತ್ತಿ ಸಂಘಗಳ ಸಾವಿರಾರು ಕಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಯಶಸ್ವಿಗೆ ಶ್ರಮಿಸಲು ಕಾರ್ಮಿಕ ವರ್ಗ ಹೆಗಲೊಡ್ಡಲು ಈ ಮೂಲಕ ಕರೆ ನೀಡಲಾಗಿದೆ.

ಜಿಲ್ಲಾ ಅಧ್ಯಕ್ಷ ಜಿ. ಅಮರೇಶ, ಆರ್,ರೆಡ್ಡಿ, ಅಜೀಜ್ ಜಾಗೀರದಾರ್ ಖಜಾಂಚಿ, ಜಿ.ಅಡವಿರಾವ್ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here