ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

0
41

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನಿಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದ ಘಟನೆ ನಗರದ ಎಂ.ಎಸ್.ಕೆ. ಮಿಲ್ ವರ್ತುಲ ರಸ್ತೆಯಲ್ಲಿನ ಮಿಸಬಾ ನಗರದ ಮಿರ್ಚಿ ಗೋದಾಮಿನ ಬಳಿ ವರದಿಯಾಗಿದೆ.

ಮೃತನಿಗೆ ಮದಿನಾ ಕಾಲೋನಿಯ ಶೇಖ್ ಶಫಿಉಲ್ಲಾ ರೆಹಮಾನ್ ತಂದೆ ಶೇಖ್ ಅಮ್ಜದ್ (25) ಎಂದು ಗುರುತಿಸಲಾಗಿದೆ. ಯುವಕನ ಮೇಲೆ ಹಂತಕರು ದಾಳಿ ಮಾಡಿದ್ದಾರೆ. ಹೀಗಾಗಿ ಗಂಟಲು, ತಲೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವದಿಂದ ಸ್ಥಳದಲ್ಲಿಯೇ ಯುವಕ ಪ್ರಾಣ ಬಿಟ್ಟಿದ್ದಾನೆ.

Contact Your\'s Advertisement; 9902492681

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಹಳೆಯ ದ್ವೇಷವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಕಳೆದ ಏಪ್ರಿಲ್ ೨೪ರಂದು ರಾತ್ರಿ ೧೦-೩೦ರ ಸುಮಾರಿಗೆ ಫಯಾಜ್ ಶೇಖ್ ತಂದೆ ಫರ್ನಿಶೇಖ್ ಅಲಿಯಾಸ್ ಹರೂನ್ ಶೇಖ್ ಎಂಬಾತನ ಕೊಲೆಯಾಗಿತ್ತು. ಅಲ್ಲದೇ ಆತನೊಂದಿಗಿದ್ದ ನಾಲ್ವರ ಮೇಲೆಯೂ ಹಲ್ಲೆ ಆಗಿತ್ತು. ಈ ಸಂಬಂಧ ಗುಲಬರ್ಗಾ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಹತ್ಯೆಗೆ ಒಳಗಾದ ಮದಿನಾ ಕಾಲೋನಿಯ ಶೇಖ್ ಶಫಿ ಉಲ್ಲಾ ರೆಹಮಾನ್ ತಂದೆ ಶೇಖ್ ಅಮಜದ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಹಳೆದ ದ್ವೇಷವೇ ಕೊಲೆಗೆ ಕಾರಣ ಆಗಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ನೂತನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್, ಡಿಸಿಪಿ ಕಿಶೋರ್‌ಬಾಬು, ರಾಘವೇಂದ್ರ ನಗರ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ರಾಘವೇಂದ್ರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here