ಜನರ ಸೇವೆ ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿ

0
58

ಶಹಾಬಾದ:ಜನಪ್ರತಿನಿಧಿಗಳಾದ ಮೇಲೆ ಜನರ ಸೇವೆ ಮಾಡುವುದು ಅವರ ಜವಾಬ್ದಾರಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹೇಳಿದರು.

ಅವರು ಸೋಮವಾರ ನಗರಸಭೆಯ ವ್ಯಾಪ್ತಿಯ ವಾರ್ಡ ನಂ.25 ರಲ್ಲಿ ಆಯೋಜಿಸಲಾದ ಮಣಿರಾಜ ಚಿನ್ನಸ್ವಾಮಿ ಅವರಿಗೆ ನಗರಸಭೆಯ ನೂತನ ಸದಸ್ಯೆ ಪುತಲಾ ಕಾಶೀನಾಥ ಜೋಗಿ ಅವರು ಅಟ್ಲಾಸ್ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೌರವಿಸಿದರು.

Contact Your\'s Advertisement; 9902492681

ಇತ್ತಿಚ್ಚಿಗೆ ನಡೆದ ನಗರಸಭೆಯ ವಾರ್ಡ ನಂ.25ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುತಲಾ ಕಾಶಿನಾಥ ಜೋಗಿ ಅವರು ಮತಯಾಚನೆ ಮಾಡುವ ಸಂದರ್ಭದಲ್ಲಿ ಬಡ ಕುಟುಂಬದ ಮಣಿರಾಜ ಚಿನ್ನಸ್ವಾಮಿ ಅವರು ನನಗೆ ಓಡಾಡಲು ಏನು ಇಲ್ಲ.ಇದರಿಂದ ಬಹಳ ತೊಂದರೆಯಾಗುತ್ತಿದೆ.ನೀವು ಗೆಲುವು ಸಾಧಿಸಿದ ನಂತರ ನನಗೆ ಒಂದು ಸೈಕಲ್ ನೀಡಿದರೆ ಅನುಕೂಲವಾಗುತ್ತದೆ ಎಂದು ಹೇಳಿದ್ದರು.

ಅದರಂತೆ ಗೆಲುವು ಸಾಧಿಸಿದ ನಂತರ ಮಣಿರಾಜ ಚಿನ್ನಸ್ವಾಮಿ ಅವರಿಗೆ ನಗರಸಭೆಯ ನೂತನ ಸದಸ್ಯೆ ಪುತಲಾ ಕಾಶೀನಾಥ ಜೋಗಿ ಅವರು ಅಟ್ಲಾಸ್ ಸೈಕಲ್ ನೀಡಿ ಗೌರವಿಸಿದ್ದಾರೆ.ಇದೊಂದು ಉತ್ತಮ ಕಾರ್ಯ.ಬಡವರಿಗೆ ಮಾಡಿದ ಕಾರ್ಯ ದೇವರಿಗೆ ಸಲ್ಲುತ್ತದೆ.ಇದರಂತೆ ಗೆಲುವಿಗೆ ಕಾರಣರಾದ ವಾರ್ಡನ ಎಲ್ಲಾ ಮತದಾರರ ಸೇವೆ ಮಾಡುವುದು ಸದಸ್ಯರ ಕೆಲಸ.ಅದನ್ನು ಉತ್ತಮ ರೀತಿಯಲ್ಲಿ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕುಮಾರ ಚವ್ಹಾಣ, ಹಾಷಮ್ ಖಾನ, ಮಹ್ಮದ್ ಜಾವೀದ್,ರಾಜು ಮೇಸ್ತ್ರಿ, ಮೀರಾಜ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here