ಕಿಡಿಗೇಡಿಗಳ ಕೃತ್ಯ: ವಿಷಹಾರ ಸೇವಿಸಿ ಅನೇಕ ಶ್ವಾನಗಳ ಸಾವು

0
94

ಸುರಪುರ: ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಮನೆಗಳಲ್ಲಿ ಸಾಕಿದ ನಾಯಿಗಳಿಗೆ ವಿಷವಿಕ್ಕಿ ಸಾಯಿಸಿದ ಧಾರುಣ ಘಟನೆ ನಡೆದಿದೆ.ಗ್ರಾಮದ ಜನತೆ ತಮ್ಮ ಮನೆಗಳಲ್ಲಿ ಸಾಕಿದ ಒಳ್ಳೆ ತಳಿಯ ನಾಯಿಗಳಿಗೆ ಯಾರೋ ಕಿಡಿಗೇಡಿಗಳು ಮಾಂಸದಲ್ಲಿ ಬೆಳೆಗಳಿಗೆ ಸಿಂಪಡಿಸುವ ಕೀಟ ನಾಶಕವನ್ನು ಬೆರೆಸಿ ಇಟ್ಟಿದ್ದರಿಂದ.ಮಾಂಸ ಸೇವಿಸಿದ ಸುಮಾರು ಹದಿನೈದಕ್ಕು ಹೆಚ್ಚು ನಾಯಿಗಳು ಸಾವಿಗೀಡಾಗಿವೆ.

ಈ ಹಿಂದೆಯುಕೂಡ ಇಪ್ಪತ್ತಕ್ಕು ಹೆಚ್ಚು ನಾಯಿಗಳಿಗೆ ಇದೇ ರೀತಿ ಮಾಡಿ ಸಾಯಿಸಲಾಗಿತ್ತು.ಈಗ ನಮ್ಮ ಮನೆಯಲ್ಲಿ ಸಾಕಿದ ನಾಯಿಯೂ ಸೇರಿದಂತೆ ಅನೇಕ ನಾಯಿಗಳನ್ನು ಕಿಡಿಗೇಡಿಗಳು ಸಾಯಿಸಿದ್ದು,ಇವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ನಾಯಿ ಮಾಲೀಕ ಭಿಮನಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ನಾಯಿಗಳ ಸಾವಿನ ಸುದ್ದಿ ತಿಳಿದು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದ ನಂತರ ನಾಯಿಗಳಿಗೆ ಆಹಾರದಲ್ಲಿ ವಿಷ ಬೆರೆಸಿ ಸಾಯಿಸಿದ ಸಂಗತಿ ಗೊತ್ತಾಗಿದ್ದು.ಗ್ರಾ.ಪಂ ಅಧ್ಯಕ್ಷ ಭೀರಪ್ಪ ಮಂಗಳೂರು,ಉಪಾಧ್ಯಕ್ಷ ಹಣಮಂತ್ರಾಯ ಟಣಕೇದಾರ,ಕಾರ್ಯದರ್ಶಿ ಮನೂರ ಬಾಷಾ,ರಾಜೇಸಾಬ ಚೌದ್ರಿ,ಬಸವರಾಜ ಟಣಕೇದಾರ ಇತರರು ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here