- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ; ತಾಲೂಕಿನ ಸೂಗೂರ್ ಎನ್ ಗ್ರಾಮದಲ್ಲಿ ತ್ರಿಮೂರ್ತಿ ಆಯುರ್ವೇದಿಕ್ ನ್ಯೂರೋಕೇರ್ ಮತ್ತು ನೋವು ನಿರ್ವಹಣ ಕೇಂದ್ರ ವಿಜಯಾಪುರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ಇದೇ ವೆಳೆ ಗ್ರಾಮದ 120ಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಗಪ್ಪ ತಾತನವರ್, ಕುಮಾರ್ ಭೋಜರಾಜರು, ಮಹೇಶ ಪಾಟೀಲ್ ಭೀಮರೆಡ್ಡಿ ಗೌಡ ಕುರಾಳ, ವಿಶ್ವನಾಥರೆಡ್ಡಿ ಪಾಟೀಲ್, ಸಂಗರೆಡ್ಡಿ ಪಾಟೀಲ್, ಡಾ. ವಿರೇಶ ಎಣ್ಣಿ, ಯಶಸ್, ಈರಣ್ಣ ಬಲ್ಕಲ್, ಮಲ್ಲಿಕಾರ್ಜುನ ಹಡಪದ ಸೂಗೂರ್ ಸೇರಿದಂತೆ ಅನೇಕ ಮುಖಂಡರು, ಶರಣಗೌಡ ಬೆನಕನಳ್ಳಿ, ಸೋಮಣ್ಣಗೌಡ ತುನ್ನೂರ್ ವೈದ್ಯಾಧಿಕಾರಿಗಳು ಇದ್ದರು.