ಗಣೇಶೋತ್ಸವ ಹಿನ್ನೆಲೆ ಪೊಲೀಸರಿಂದ ಪರೇಡ್

0
48

ಸೇಡಂ: ಗಣೇಶ ಉತ್ಸವ ಮತ್ತು ಮೊಹರಂ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಪರೇಡ್ ನಡೆಸಲಾಯಿತು.

ಎಎಸ್ಪಿ ಅಕ್ಷಯ ಹಾಕೆ ನೇತೃತ್ವದಲ್ಲಿ ಹಳೆಯ ಸರ್ಕಾರಿ ಆಸ್ಪತ್ರೆಯ ಎದುರು ಪರೇಡ್ ಗೆ ಚಾಲನೆ ನೀಡಲಾಯಿತು. ನಂತರ ಬಸ್ ನಿಲ್ದಾಣ, ಮುಖ್ಯ ರಸ್ತೆ, ರೈಲ್ವೆ ನಿಲ್ದಾಣ, ಚೌರಸ್ತಾ ಮಾರ್ಗವಾಗಿ, ದೊಡ್ಡ ಅಗಸಿ, ರಂಗಾರೇಜಗಲ್ಲಿ, ಸಣ್ಣ ಅಗಸಿ, ಹಳೇ ಬಜಾರ್ ನಲ್ಲಿ ಪರೇಡ್ ಸಂಚರಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪರೇಡ್ ಮೂಲಕ ಸೂಚಿಸಲಾಯಿತು.

Contact Your\'s Advertisement; 9902492681

ಈ ವೇಳೆ ಸಿಪಿಐ ಶಂಕರಗೌಡ ಪಾಟೀಲ, ಪಿಎಸ್ಐ ಸುಶೀಲಕುಮಾರ, ಸಂತೋಷ ರಾಠೋಡ, ಶ್ರೀಶೈಲ ಅಂಬಾಟಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here