ಕಲಬುರಗಿ ಕಸಾಪ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನ, ಸನ್ಮಾನ

0
173

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ಜನವರಿ 19 ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕಿ-ವಿಶ್ರಾಂತ ಪ್ರಾಂಶುಪಾಲರಾದ ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರನ್ನು ಸಾಂಪ್ರದಾಯಿಕವಾಗಿ ಅಧಿಕೃತ ಆಹ್ವಾನ ನೀಡಿ ಗೌರವಿಸಲಾಯಿತು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, 12ನೇ ಶತಮಾನದ ಬಸವಾದಿ ಶರಣರ ವಚನಗಳು ನಮ್ಮ ಜೀವನದಲ್ಲಿ ಬದುಕುವ ಕಲೆ ಕಲಿಸುತ್ತವೆ. ಅಂಥ ಶ್ರೇಷ್ಠ ಮಟ್ಟದ ವಚನ ಸಾಹಿತ್ಯವನ್ನು  ಪ್ರತಿಯೊಬ್ಬರ ಮನೆ-ಮನಕ್ಕೂ ತಲುಪಿಸುವ ಕಾರ್ಯ ಮಾಡಬೇಕಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ವಚನ ಸಾಹಿತ್ಯದ ಕೊಡುಗೆ ಬಹಳ ಮಹತ್ವದ್ದಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹಾಗೂ ಅವರ ಬಳಗ ಜಿಲ್ಲೆಯಲ್ಲಿ ಸಮಾನತೆಯ ಸಾಮರಸ್ಯದ ಸದೃಢ ಸಮಾಜ ನಿರ್ಮಾಣ ಮಾಡುವ ಕನಸನ್ನು ಹೊತ್ತು ಶರಣರ ಚಿಂತನೆಗಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸು ಕಾರ್ಯ ಮಾಡುತ್ತಿರುವುದು ಇಂದಿನ ಸಮಾಜದಲ್ಲಿ ಬದಲಾವಣೆಗೆ ಬಹು ದೊಡ್ಡ ಪ್ರೇರಣೆ ನೀಡಲಿದೆ ಎಂದರು. ಶರಣರು ಮಹಿಳೆಗೆ ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಹಕ್ಕನ್ನು ನೀಡಿರುವಂತೆ ಪರಿಷತ್ತು ಕೂಡ ಮೊದಲ ಬಾರಿಗೆ ಹಮ್ಮಿಕೊಂಡಿರುವ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಹಿಳೆಯನ್ನೇ ಆಯ್ಕೆ ಮಾಡುವ ಮೂಲಕ ಶರಣರ ಆಶಯವನ್ನು ಈಡೇರಿಸಿ ಮಹಿಳೆಗೂ ಆದ್ಯತೆ ನೀಡಿರುವುದು ಪರಿಷತ್ತಿನ ಘನತೆ ಹೆಚ್ಚಿಸಿಕೊಂಡಂತಾಗಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, 12ನೇ ಶತಮಾನದ ಶರಣರ ವಚನ ಸಾಹಿತ್ಯ ಎಂದೆಂದಿಗೂ ಮಾನವ ಜೀವನಕ್ಕೆ ಉತ್ತಮ ದಾರಿ ದೀಪವಿದ್ದಂತೆ. ಈ ಜಗತ್ತಿನ ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರದ ಸಮಸ್ಯೆಗಳಿಗೆ ಶರಣರ ವಚನಗಳಲ್ಗಲಿ ಪರಿಹಾರ ಇದೆ. ಆದ್ದರಿಂದ ವಚನಗಳನ್ನು ಇಂದು ನಾವೆಲ್ಲರೂ ಅಧ್ಯಯನ ಮಾಡಿ ನಮ್ಮ ಬದುಕ್ನು ಹಸನಾಗಿಸಿಕೊಳ್ಳಬೇಕಾಗಿದೆ ಎಂದ ಅವರು, ಇಂದಿನ ಆಧುನಿಕ ಯುಗದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರೂ ದಿನ ಬೆಳಗಾದರೆ ಅನೇಕ ರೀತಿಯ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇವುಗಳಿಂದ ಈ ಸಮಾಜವನ್ನು ಮುಕ್ತಗೊಳಿಸಬೇಕಾದರೆ ಮತ್ತೆ ನಾವೆಲ್ಲರೂ ವಚನ ಸಾಹಿತ್ಯದ ಕಡೆಗೆ ಮುಖ ಮಾಡಬೇಕಾಗಿದೆ. ಈ ಪ್ರಯತ್ನಕ್ಕಾಗಿಯೇ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಗೋದುತಾಯಿ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ಜಾನಕಿ ಹೊಸೂರ್, ಬಿ.ಈಡಿ. ಕಾಲೇಜಿನ ಪ್ರಿನ್ಸಿಪಾಲ್ ಕಲ್ಪನಾ ಭೀಮಳ್ಳಿ, ಪ್ರಾಧ್ಯಾಪಕಿ, ಡಾ. ಪುಟ್ಟಮಣಿ ದೇವಿದಾಸ, ಕೃಪಾಸಾಗರ ಗೊಬ್ಬೂರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಜಿ ಬಾಳಿ, ಡಾ. ಕೆ.ಎಸ್.ಬಂಧು, ಬಾಬುರಾವ ಪಾಟೀಲ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಸೋಮಶೇಖರಯ್ಯಾ ಹೊಸಮಠ, ಎಂ.ಎನ್.ಸುಗಂಧಿ, ರವಿಕುಮಾರ ಶಹಾಪುರಕರ್, ವಿನೋದಕುಮಾರ ಜೇನವೇರಿ, ಶಿವಾನಂದ ಮಠಪತಿ, ಎಸ್.ಕೆ. ಬಿರಾದಾರ, ಸಂತೋಷ ಕುಡಳ್ಳಿ, ನಾಗಪ್ಪ ಸಜ್ಜನ್, ಗುರುಬಸಪ್ಪ ಸಜ್ಜನಶೆಟ್ಟಿ, ಪ್ರಭು ಫುಲಾರಿ, ಶಾಂತಕುಮಾರ ಕೋಳಕೂರ,  ಹೆಚ್.ಎಸ್. ಬರಗಾಲಿ, ಧರ್ಮಣ್ಣ ಹೆಚ್. ಧನ್ನಿ, ಮಾಣಿಕ್ ನಾಗಗುಂಡ, ಮಹಾನಂದಾ ಸಿಂಗೆ, ಮಂಜುಳಾ ಸುತಾರ, ನಾಗನ್ನಾಥ ಯಳಸಂಗಿ, ಮಂಜುನಾಥ ಕಂಬಾಳಿಮಠ, ಬಸಯ್ಯ ಸ್ವಾಮಿ, ಉಮೇಶ ಕೋಟನೂರ, ಜಗದೀಶ ಮರಪಳ್ಳಿ, ಮಲ್ಲಿನಾಥ ಸಂಗಶೆಟ್ಟಿ, ಸೋಮಶೇಖರ ನಂದಿಧ್ವಜ ಸೇರಿದಂತೆ ಪರಿಷತ್ತಿನ ಪ್ರಮುಖರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here