ಡಿ.ಕೆ.ಶಿವಕುಮಾರ ಬಂಧನಕ್ಕೂ, ಬಿಜೆಪಿಗೆ ಸಂಬಂಧ ಇಲ್ಲಾ: ಬಸವರಾಜ ಬೊಮ್ಮಾಯಿ

0
75

ಹಾವೇರಿ: ಕಳೆದ ನಾಲ್ಕು ದಿನಗಳ ಸುಧೀರ್ಘ ವಿಚಾರಣೆ ಬಳಿಕ, ಡಿ.ಕೆ.ಶಿವಕುಮಾರ ಅವರ ಬಂಧನವಾಗಿರುಯವದಕ್ಕೂ ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ನಗರದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಲು ಬಂದಾಗ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

Contact Your\'s Advertisement; 9902492681

ಡಿಕೆಶಿ ಬಂಧನದ ವಿಚಾರ, ಕಾನೂನು ಪ್ರಕಾರ ನಡೆಯುತ್ತಿದೆ. ಇಡಿ ಅಧಿಕಾರಿಗಳು ಕಾನೂನಿನ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳ ವಿಚಾರಣೆಗೆ ಡಿಕೆಶಿ ಸರಿಯಾಗಿ ಉತ್ತರಿಸಿದ್ದರೆ, ಅವರನ್ನು ಬಂಧಿಸುತ್ತಿರಲಿಲ್ಲಾ. ಅವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ಡಿಕೆಶಿ ಅವರನ್ನು ಬಂಧಿಸಲಾಗಿದೆ. ಕೋರ್ಟನಲ್ಲಿ ಈ ವಿಚಾರ ಇದೆ ಬಿಜೆಪಿಗೂ ಇದಕ್ಕೂ ಸಂಬಂಧ ಇಲ್ಲಾ ಎಂದು ಸ್ಪಷ್ಟಪಡಿಸಿದರು.

ಇನ್ನು ಡಿ.ಕೆ.ಶಿವಕುಮಾರ ಬಂಧನದ ಬಳಿಕ ರಾಮನಗರ ಜಿಲ್ಲೆ ಹಾಗೂ ಕನಕಪುರದಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿನ ಕಾನೂನು ಕೆಲವು ಪ್ರತಿಭಟನಾಕಾರರು ಕೈಗೆ ತೆಗೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಾಮನಗರ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕನಕಪುರ ಮತ್ತು ರಾಮನಗರಗಳಲ್ಲಿ ಶಾಂತಿ ಸಭೆ ಮಾಡಲಾಗುತ್ತಿದೆ. ಜೊತೆಗೆ ಈಗಾಗಲೇ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ ಭಯಪಡುವ ಅವಶ್ಯಕತೆ ಇಲ್ಲಾ ಎಂದು ತಿಳಿಸಿದರು.‌

ಪೊಲೀಸ್ ರಿಗೆ ಅನುಕೂಲವಾಗು ಔರಧಕರ್ ವರದಿ ಪರಿಶೀಲನೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಆ ವರದಿ ಅನುಷ್ಠಾನಕ್ಕೆ ತಂದು ಜಾರಿಗೆ ಮಾಡಲಾಗುವುದು. ಅಬಕಾರಿ ಸಚಿವರು ಮನೆ ಮನೆಗೆ ಸಾರಾಯಿ ಸರಬರಾಜು ಮಾಡುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲಾ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here