ಕಲಬುರಗಿ: ಜಿಲ್ಲೆಯಲ್ಲಿ ಪೆÇಲೀಸ್ ಆಯುಕ್ತಾಲಯ ಸ್ಥಾಪನೆಯಾಗಿದ್ದು, ಇದರಲ್ಲಿ ಸಿಮಿ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಘಟಕಗಳಲ್ಲಿ (ಅಂದರೆ ಲೋಕಾಯುಕ್ತ, ಸಿಓಡಿ, ಎಸಿಬಿ, ಜೆಸ್ಕಾಂ, ಐಎಸ್ಡಿ) ನಿಯೋಜನೆ ಮಾಡುವಾಗ ತಾರತಮ್ಯವಾಗಿರುತ್ತದೆ. ಈ ಎಲ್ಲಾ ಘಟಕಗಳಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು. ರಾಜ್ಯದಲ್ಲಿರುವ ಎಲ್ಲಾ ಕಮೀಷನರೇಟ್ ನಗರಗಳಾದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡದಂತೆ ಕಲಬುರಗಿ ನಗರಕ್ಕೂ ಸಹ 60:40 ಅನುಪಾತದಂತೆ ಕಲಬುರಗಿ ಜಿಲ್ಲೆಯ ಘಟಕಗಳಲ್ಲಿ ನಾಗರಿಕ ಪೆÇಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ ಅನುಕೂಲವಾಗುವಂತೆ ನಿಯೋಜನೆ ಕರ್ತವ್ಯಕ್ಕೆ ವರ್ಗಾಯಿಸಬೇಕು ಎಂದು ಪೆÇೀಲೀಸ ಮಹಾಸಂಘದ ಜಿಲ್ಲಾಧ್ಯಕ್ಷ ರವಿ.ಎನ್.ದೇಗಾಂವ ನೇತೃತ್ವದಲ್ಲಿ ಆಳಂದ ಶಾಸಕ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್.ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ಕಲಬುರಗಿ ನಗರ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸುಮಾರು 8 ಲಕ್ಷ ಜನರು ವಾಸಿಸುತ್ತಿದ್ದು, ಇದಕ್ಕೆ ಅನುಗುಣವಾಗಿ ಹೊಸ ಪೆÇಲೀಸ್ ಠಾಣೆಗಳ ಅವಶ್ಯಕತೆ ಇರುತ್ತದೆ ಮತ್ತು ಈಗಾಗಲೇ ಇರುವ ಪೆÇಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯಲ್ಲಿ ಕೊರತೆ ಇರುತ್ತದೆ. ಆದ್ದರಿಂದ ಸಿಬ್ಬಂದಿ ಸಂಖ್ಯಾಬಲ ಹೆಚ್ಚಿಸಬೇಕು. ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ ಹೆಚ್ಚುವರಿ ಪೆÇಲೀಸ್ ಠಾಣೆಗಳನ್ನು ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪೆÇೀಲಿಸರ ಇನ್ನಿತರ ಬೇಡಿಕೆಗಳಾದ ಪೆÇಲೀಸರಿಗೆ ಒಂದು ಹಗಲು/ ರಾತ್ರಿ ಬೀಟ್ ಕರ್ತವ್ಯ ನಿರ್ವಹಿಸಲು ಪೆಟ್ರೋಲ್ ಭತ್ಯೆ ನೀಡಬೇಕು. ಔರಾದಕರ್ ವರದಿಯನ್ನು ಮೊದಲಿನಂತೆ ಸಮರ್ಪಕವಾಗಿ ಜಾರಿಗೊಳಿಸಬೇಕು.ಪೆÇಲೀಸರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ದಿನದ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಮಾನ್ಯ ಡಿ.ಜಿ. ಆದೇಶದ ಅನುಮೋದನೆ ಹೊರಡಿಸಬೇಕು. ಪೆÇಲೀಸ್ ಸಿಬ್ಬಂದಿಗೆ ತಮ್ಮ ವೇತನದಲ್ಲಿ ಬೀಟ್ ಕರ್ತವ್ಯಕ್ಕಾಗಿ 3000 ದಿಂದ 4000 ರೂಪಾಯಿಗಳು ಖರ್ಚಾಗುತ್ತಿದ್ದು ಆರ್ಥಿಕ ನೆರವು ನೀಡಬೇಕು.
ಪೆÇಲೀಸರ ಆರೋಗ್ಯದ ಹಿತದೃಷ್ಟಿಯಿಂದ ಕನಿಷ್ಠ ಎರಡು ದಿನಕ್ಕೊಮ್ಮೆ ರಾತ್ರಿಗಸ್ತು ನಿರ್ವಹಿಸಲು ಡಿ.ಜಿ. ಆದೇಶ ಅನುಮೋದನೆ ಹೊರಡಿಸಬೇಕು.ಪೆÇಲೀಸ್ ಸಿಬ್ಬಂದಿಗಳ 12 ಗಂಟೆ ಅವಧಿಯನ್ನು 8 ಗಂಟೆಗೆ ಇಳಿಸಬೇಕು. ಸಿಬ್ಬಂದಿಗಳಿಗೆ ಸಿ.ಎಲ್. ಜೊತೆಗೆ ವಾರದ ರಜೆ ಮಂಜೂರು ಮಾಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷ ಸಂದೀಪ ಭರಣಿ, ಸಂತೋಷ ಪಾಟೀಲ, ಪ್ರಕಾಶ ಮಠಪತಿ ಸೇರಿದಂತೆ ಇತರರು ಇದ್ದರು.