ಸಮಾಜದ ಏಳಿಗೆಗಾಗಿ ಶ್ರಮಿಸಿದ ಶ್ರೇಷ್ಠ ವಚನಕಾರ ನಿಜಶರಣ ಅಂಬಿಗರ ಚೌಡಯ್ಯ

0
10

ಕಲಬುರಗಿ; ನಗರದ ಉದನೂರ ರಸ್ತೆಯ ಜೈ ಭವಾನಿ ಬೇಕರಿ ಮುಂಭಾಗದಲ್ಲಿ 904 ನೇಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಅತಿ ಸರಳತೆಯಿಂದ ಆಚರಿಸಲಾಯಿತು.

ಚೌಡಯ್ಯ ನವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಶಿವಪುರ ಗ್ರಾಮದ ವಿರೂಪಾಕ್ಷ ಮತ್ತು ಪಂಪಾದೇವಿ ಉದರದಲ್ಲಿ ಜನಿಸಿದರು.ಇವರು ಮಲಪ್ರಭಾ ನದಿಯಲ್ಲಿ ತನ್ನ ಕುಲಕಸುಬಾದ ದೋಣಿ ನಡೆಸುವ ಮೂಲಕ ಜೀವನ ರೂಪಿಸಿಕೊಂಡರು.ತಮ್ಮ ವಚನಗಳ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಿದ ಶ್ರೇಷ್ಠ ವಚನಕಾರರಾಗಿದ್ದಾರೆ.

Contact Your\'s Advertisement; 9902492681

ಅವರ ಆದರ್ಶಗಳನ್ನು ಹಾಗೂ ನೈತಿಕ ಮೌಲ್ಯಗಳನ್ನು ಅನುಸರಿಸೊಣ ಎಂದು ಕರ್ನಾಟಕ ಜಾನಪದ ಪರಿಷತ್ತು ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ ಹೇಳಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಬಸವರಾಜ ಅತನೂರ,ದುಂಡಣ್ಣಾ,‌ದತ್ತು ತಳವಾರ,ಯಲ್ಲಪ್ಪ ಭಜಂತ್ರಿ,ಜಗ್ಗಪ್ಪ ಭಜಂತ್ರಿ,ರಾಜು,ಶರಣು,ಈಶ್ವರ,ಬಾಬು ಬುಸ್ಸಾ, ಶ್ರೀಶೈಲ್,ಕಿಸಾನ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here