ಸರಕು ಸಾಗಾಣಿಕೆ ಖಾಸಗಿಕರಣ; ಮುಸ್ಲಿಂ ವಿರೋಧಿ ರಾಜಕಾರಣಕ್ಕೆ ಷಡ್ಯಂತರ

0
19

ರಾಯಚೂರು: ಮೋದಿ ಅಮಿತ್ ಷಾ ಜಾರಿಗೆ ತಂದ ಭಾರತ ನ್ಯಾಯ ಸಹಿಂತೆಯ ವಿರುದ್ಧ ಕಳೆದ 25 ದಿನಗಳಿಂದ ನಡೆದಿರುವ ಲಾರಿ ಚಾಲಕರ ಅಖಿಲ ಭಾರತ ಮುಷ್ಕರ ಮುಂದುವರೆದಿದೆ. ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಈ ಮುಷ್ಕರ ಬೆಂಬಲಿಸಿ ಮಾತನಾಡಿದ,ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ಸಮನ್ವಯಕಾರ ಆರ್. ಮಾನಸಯ್ಯ ಹೇಳಿದರು.

ರಸ್ತೆ ಅಪಘಾತಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಜಾರಿಗೆ ತಂದ ಹೊಸ ಕಾಯ್ದೆಯ ಹಿಂದೆ ದೊಡ್ಡ ಷಡ್ಯಂತರ ಇದೆ. ಅಪಘಾತ ಪ್ರಕರಣದಲ್ಲಿ ಚಾಲಕನಿಗೆ 10 ವರ್ಷ ಜೈಲು 7 ಲಕ್ಷ ದಂಡಕ್ಕೆ ಹೆದರಿ ಲಾರಿ ಮಾಲೀಕ ಹಾಗೂ ಚಾಲಕ ಸರಕು ಸಾಗಾಣಿಕೆ ಕಸುಬಿಗೆ ಕೈ ಮುಗಿಯಲಿದ್ದಾರೆ.

Contact Your\'s Advertisement; 9902492681

ತದನಂತರ ದೇಶದ 152000 ಕಿಲೋ ಮೀಟರ್ ವ್ಯಾಪ್ತಿಯ 599 ರಾಷ್ಟ್ರೀಯ ಹೆದ್ದಾರಿಗಳ ಸರಕು ಸಾಗಾಣಿಕೆ ದಂದೆ ರಿಲಯನ್ಸ್ ಹಾಗೂ ಎಸ್ ಆರ್ ಕಂಪನಿಗಳ ಪಾಲಾಗುತ್ತದೆ. ಅಲ್ಲದೆ ಭಾರತ ಸರಕು ಸಾಗಾಣಿಕೆ ಕ್ಷೇತ್ರದಲ್ಲಿ 7.56 ಕೋಟಿ ಚಾಲಕರು, 5 ಕೋಟಿ ಹಮಾಲರು, 3 ಕೋಟಿಗೂ ಹೆಚ್ಚು ಗ್ಯಾರೇಜ್ ವರ್ಕ್ ಶಾಪ್ ಕೆಲಸಗಾರರು ಅಂದರೆ 15 ಕೋಟಿಗೂ ಹೆಚ್ಚು ಜನ ದುಡಿದು ಜೀವಿಸುತ್ತಿದ್ದಾರೆ.

ಈ ಪೈಕಿ ಶೇಕಡ 80ರಷ್ಟು ಮುಸ್ಲಿಮರಿದ್ದಾರೆ! ಒಟ್ಟಾರೆ ರಾಷ್ಟ್ರೀಯ ಸರಕು ಸಾಗಾಣಿಕೆ ಖಾಸಗಿಕರಣ ಹಾಗೂ ಮುಸ್ಲಿಮ ವಿರೋಧಿ ದ್ವೇಷ ರಾಜಕಾರಣ ಸೇರಿ ಹೊಸ ಕಾನೂನು ಬಂದಿದೆ. ಇದನ್ನು ಹಿಂಪಡೆಯುವವರೆಗೂ ಈ ರಾಷ್ಟ್ರೀಯ ಮುಷ್ಕರ ಮುಂದುವರೆಯಬೇಕು ” ಎಂದು ಕರೆ ನೀಡಿದರು. ವಿವಿಧ ರಂಗಗಳ ಕಾರ್ಮಿಕರು ಈ ರಾಷ್ಟ್ರೀಯ ಲಾರಿ ಚಾಲಕರ ಮುಷ್ಕರವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭಾಷಾ ಖಾನ್, ಹುಚ್ಚ ರೆಡ್ಡಿ, ಅಜೀಜ್ ಜಾಗೀರ್ದಾರ್, ಅಡಿವಿ ರಾವ್, ನಿರಂಜನ್ ಕುಮಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here