ಕಲಬುರಗಿ: ನಗರದ ರಾಮ ಮದಿಂರ ವೃತ್ತದಲ್ಲಿ ಜೇವರ್ಗಿ ಶಾಸಕ ಹಾಗೂ ಕೆ.ಕೆ.ಆರ್ .ಡಿ.ಬಿ ಅಧ್ಯಕ್ಷ ಡಾ : ಅಜಯ ಸಿಂಗ್ ಅವರ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಯುವ ಮುಖಂಡ ಶಿವುಕುಮಾರ ಚೋರಗಿ, ದಕ್ಷಿಣ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುನಿನ್ ಉದನೂರ ಹಾಗೂ ಮೈತ್ರಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಔರಾದಕರ್ ಇವರ ನೇತೃತ್ವದಲ್ಲಿ ಅನ್ನದೋಸೋಹ ಮಾಡಲಾಯಿತು.
ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ ವೀರನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ, ಕಾಂಗ್ರೆಸ್ ಮುಖಂಡರಾದ ನೀಲಕಂಠ ರಾವ ಮೂಲಗೆ, ಅಭಿಷೇಕ ಪಾಟೀಲ ಸೇರಿದಂತೆ ಇತರರು ಇದ್ದರು.