ರಾಷ್ಟ್ರ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹತೆ ಪಡೆದ ಎಸ್‍ಬಿಆರ್‍ನ ವಿದ್ಯಾರ್ಥಿಗಳು

0
17

ಕಲಬುರಗಿ; ಶರಣಬಸವೇಶ್ವರ ವಸತಿ ಪಬ್ಲಿಕ್ (ಎಸ್‍ಬಿಆರ್) ಶಾಲೆಯ ಇಬ್ಬರು ವಿದ್ಯಾರ್ಥಿಗಳು ತಮ್ಮ ವಿನೂತನ ವಿಜ್ಞಾನ ಪ್ರಾಜೆಕ್ಟಗಳೊಂದಿಗೆ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್‍ನ ಅಂಗವಾಗಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ಏಪ್ರಿಲ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 30 ವಿದ್ಯಾರ್ಥಿಗಳು ತಮ್ಮ ವಿಜ್ಞಾನದ ಪ್ರಾಜೆಕ್ಟ್‍ಗಳನ್ನು ಪ್ರಸ್ತುತ ಪಡಿಸಲಿದ್ದಾರೆ. 30 ಮಂದಿಯಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಂತಿಮ ಸ್ಪರ್ಧೆಯ ಸ್ಥಳ ಮತ್ತು ಅಂತಿಮ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಶಾಲೆಯ ಪ್ರಾಚಾರ್ಯರಾದ ಶ್ರೀ ಎನ್.ಎಸ್.ದೇವರಕಲ್ ಬುಧವಾರ ಕಲಬುರಗಿ ನಗರದಲ್ಲಿ ತಿಳಿಸಿದರು.

Contact Your\'s Advertisement; 9902492681

ಶಿಕ್ಷಕಿ ಪೂಜಾ ಪಾಟೀಲ್ ಮಾರ್ಗದರ್ಶನದಲ್ಲಿ, ಟೀಮ್ ಲೀಡರ್ ಆಗಿರುವ ಭವಾನಿ ಎಸ್ ಅಷ್ಟಗಿ ಮತ್ತು ಭೂಮಿಕಾ ಎಂ ಬೆಳ್ಳೆ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ “ಜಂಕ್ ಫುಡ್ ಹುಡುಗಿಯರನ್ನು ವಿಶೇಷವಾಗಿ ಹದಿಹರೆಯದವರಲ್ಲಿ ಹೇಗೆ ಬಾಧಿಸುತ್ತದೆ” ಎಂಬ ಪ್ರಾಜೆಕ್ಟ್‍ನೊಂದಿಗೆ ಜೂನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ಶಿಕ್ಷಕಿ ಅಶ್ವಿನಿ ಚವ್ಹಾಣ್ ಅವರ ಮಾರ್ಗದರ್ಶನದಲ್ಲಿ ತಂಡದ ನಾಯಕಿ ಆಯೇμÁ ತಹರೀಮ್ ಮತ್ತು ಅತಿಖಾ ತಸ್ನೀಮ್ ಅವರು ತಮ್ಮ ವಿನೂತನ ಯೋಜನೆಯಾದ “ಮಲ್ಟಿಟಾಸ್ಕರ್ ವಾಟರ್ ಹಯಸಿಂತ್-ಮಾಲಿನ್ಯಕ್ಕೆ ಪರಿಹಾರ” ಎಂಬ ವಿನೂತನ ಯೋಜನೆಯೊಂದಿಗೆ ಸೀನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಗೌರವಗಳಿಗಾಗಿ ತಮ್ಮ ವಿಜ್ಞಾನ ಯೋಜನೆಯನ್ನು ಪ್ರಸ್ತುತಪಡಿಸುವ ಕರ್ನಾಟಕ ತಂಡದ ಭಾಗವಾಗಿದೆ.

ತಂಡದ ನಾಯಕಿ ಆಯೇμÁ ತಹರೀಮ್ ಅವರ ಪ್ರಕಾರ, ತೀರ್ಪುಗಾರರ ಮೆಚ್ಚುಗೆ ಮತ್ತು ಪುರಸ್ಕಾರಗಳನ್ನು ಗಳಿಸಿದ ಈ ಯೋಜನೆಯು, ವಾಟರ್ ಹಯಸಿಂತ್, ಜಲಮೂಲಗಳಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಜಲಮೂಲಗಳಲ್ಲಿ ವಾಸಿಸುವ ಬಹುಪಾಲು ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹಾಗೂ ಇದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಎಂಬುವುದರ ಕುರಿತು ವಿವರಿಸಲಾಗಿದೆ.

ವಾಟರ್ ಹಯಸಿಂತ್‍ನ್ನು ಕಾಗದ, ಪೀಠೋಪಕರಣಗಳು, ಚೀಲಗಳು, ಟೋಪಿಗಳು, ಕಾರ್ಪೆಟ್‍ಗಳು, ಹೂದಾನಿಗಳು, ಜೈವಿಕ ಅನಿಲ, ಜೈವಿಕ ಇಂಧನ, ಶಿಲೀಂಧ್ರನಾಶಕ ಔಷಧಗಳು ಹಾಗೂ ಫ್ಯೂಜನ್ ಸೀರೆಗಳನ್ನು ಉತ್ಪಾದಿಸಲು ಬಳಸಬಹುದು. ಯೋಜನೆಯ ಪ್ರಕಾರ, ಈ ನೀರಿನ ಸಸ್ಯವನ್ನು ಜಾನುವಾರುಗಳ ಆಹಾರದಲ್ಲಿ ಖಾದ್ಯ ಪೂರಕವಾಗಿ ಬಳಸಬಹುದು, ಇದು ಹಾಲುಣಿಸುವ ತಾಯಿ ಹಸುಗಳು ಮತ್ತು ಕರುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಆಯೇμÁ ತಿಳಿಸಿದ್ದಾರೆ.

“ಅಜೋಲ್ಲಾ” ದೊಂದಿಗೆ ಸಂಸ್ಕರಿಸಿದ ವಾಟರ್ ಹಯಸಿಂತ್ ಅನ್ನು ಜಾನುವಾರುಗಳ ಆಹಾರವಾಗಿ ಪೆÇ್ರೀಟೀನ್ ಭರಿತ ಜಲ ಜರೀಗಿಡವು ಹಲವಾರು ಪೌಷ್ಟಿಕಾಂಶದ ಪ್ರಯೋಜನಗಳನ್ನು ನೀಡುತ್ತದೆ ಎಂದು ಆಯೇμÁ ಹೇಳಿದರು.

ಈ ಸಸ್ಯಗಳಲ್ಲಿನ ಹೆಚ್ಚಿನ ಪೆÇ್ರೀಟೀನ್ ಅಂಶವು ಸ್ನಾಯುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಜಾನುವಾರುಗಳಲ್ಲಿ ಹಾಲಿನ ಉತ್ಪಾದನೆಯನ್ನು ಸುಧಾರಿಸುತ್ತದೆ ಮತ್ತು ಜಾನುವಾರುಗಳ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಯಸಿಂತ್ ಮತ್ತು ಅಜೋಲ್ಲಾದಲ್ಲಿರುವ ಫೈಬರ್ ಅಂಶವು ಜಾನುವಾರುಗಳಲ್ಲಿನ ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದರು.

ಎಸ್‍ಬಿಆರ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯರಾದ ಭವಾನಿ ಮತ್ತು ಭೂಮಿಕಾ ಅವರು ಪ್ರಸ್ತುತಪಡಿಸಿದ ಪ್ರಾಜೆಕ್ಟ್ ಜೂನಿಯರ್ ವಿಭಾಗದ ಅಡಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿದೆ. ಇದು ಹದಿಹರೆಯದವರು ಜಂಕ್ ಫುಡ್ ಸೇವಿಸುವುದರಿಂದ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಲಾಗಿದೆ.

ದಿನಾಲೂ ಜಂಕ್ ಫುಡ್ ಸೇವಿಸುವುದರಿಂದ ಆರಂಭಿಕವಾಗಿ ಹದಿಹರೆಯದ ಸ್ತ್ರೀಯರಲ್ಲಿ ಮೊದಲ ಮುಟ್ಟಿನ ಅವಧಿಯಲ್ಲಿ ಕ್ಷಿಪ್ರ ದೇಹದ ಬೆಳವಣಿಗೆಗೆ ಹೇಗೆ ಕಾರಣವಾಗುತ್ತದೆ ಮತ್ತು ಪ್ರೌಢಾವಸ್ಥೆಯ ಆರಂಭಿಕ ಅವಧಿಯಲ್ಲಿ ಅನಿಯಮಿತ ಅವಧಿಗಳು, ಅಂಡಾಶಯದ ಕ್ಯಾನ್ಸರ್, ಹಾರ್ಮೋನ್ ಅಸಮತೋಲನ ಸೇರಿದಂತೆ ಇತರ ಅಪಾಯಕಾರಿ ಅಂಶಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಈ ಯೋಜನೆಯಲ್ಲಿ ವಿವರಿಸಲಾಗಿದೆ. ಇದರ ಹೊರತಾಗಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದ ಪ್ರಕಾರ ಜಂಕ್ ಫುಡ್ ಸೇವನೆಯ ಇತರ ಆರೋಗ್ಯ ಅಪಾಯಗಳು ಸ್ಥೂಲಕಾಯತೆ ಮತ್ತು ಅಧಿಕ ತೂಕವು ಆರಂಭಿಕ ಹದಿಹರೆಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಪ್ರಾಜೆಕ್ಟ್‍ನಲ್ಲಿ ತಿಳಿಸಲಾಗಿದೆ.

ಈ ವಿದ್ಯಾರ್ಥಿಗಳ ಶ್ಲಾಘನೀಯ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಸಂತಸ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here