ವಿದ್ಯಾರ್ಥಿಗಳು ಶ್ರಮ ಸಂಸ್ಕೃತಿ ಬೆಳೆಸಿಕೊಳ್ಳಿ

0
60

ಕಲಬುರಗಿ: ಇಂದು ವಿದ್ಯಾರ್ಥಿಗಳು ಕಠಿಣ ಪರಿಶ್ರಮವಹಿಸಿ ವಿದ್ಯೆ ಗಳಿಸಿಕೊಳ್ಳಿ. ಇದಕ್ಕೆ ಯಾವುದೇ ಶಾರ್ಟ್ ಕಟ್ ಗೆ ಹೋಗಬೇಡಿ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶರಾದ ಶಿವಶರಣಪ್ಪ ಮೂಳೆಗಾಂವ ಅವರು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ಶಿವಗಂಗಾ ರುಮ್ಮಾ ಅವರು ಮಹಿಳೆಯ ವಿವಿಧ ಮುಖಗಳನ್ನು ಪರಿಚಯಿಸಿ, ಅವಳ ಶಕ್ತಿ ಸಾಮರ್ಥ್ಯದ ಬಗ್ಗೆ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸೋಮನಾಥ ನಿಗ್ಗುಡಗಿ ಅವರು ವಹಿಸಿದ್ದರು. ಡಾ. ಶರಣಬಸಪ್ಪ ಹರವಾಳ, ಡಾ. ವೀರೇಂದ್ರ ಪಾಟೀಲ, ಡಾ. ರಾಜೇಂದ್ರ ಕೊಂಡಾ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನೂ ಡಾ ನಾಗೇಂದ್ರ ಮಸೂತಿ ಯವರು ಸ್ವಾಗತಿಸಿದರೆ, ಡಾ. ಕಾಶಿಬಾಯಿ ಭೋಗಶೆಟ್ಟಿ, ಶೈಲಜಾ, ಜಗದೇವಿ, ಜ್ಯೋತಿ ಪಾಟೀಲ ಅವರು ವಿವಿಧ ವರದಿ ವಚನ ಮಾಡಿದರು. ಅನಿತಾ ಅವರು ವಂದಿಸಿದರು. ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here