ಕಲಬುರಗಿ: ಆಳಾಗಿ ದುಡಿದು ಅರಸನಾಗಿ ಉಣ್ಣು ಎನ್ನುವ ಗಾದೆ ಮಾತಿನಂತೆ ಯಾವುದೇ ಕೆಲಸದ ಬಗ್ಗೆ ಕಿಳಿರೀಮೆಯ ಮನೋಭಾವ ಬೆಳೆಸಿಕೊಳ್ಳದೆ ಶೃದ್ದೆಯಿಂದ ಮಾಡಿ ಯಶಸ್ಸು ಸಾಧಿಸಬಹುದು ಎಂದು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶಕುಮಾರ ಗಂವ್ಹಾರ ಹೇಳಿದರು.
ಅವರು ಸರಕಾರಿ ಪದವಿ ಮಹಾವಿದ್ಯಾಲಯ ಮಹಾಗಾಂವ್ ಕ್ರಾಸ್ ಐ.ಕ್ಯೂ.ಎ.ಸಿ.ಆಯೋಜಿಸಿದ್ದ “ಗ್ರಾಮೀಣ ಅಭಿವೃದ್ದಿಯಲ್ಲಿ ಸ್ವಯಂ ತರಬೇತಿ ಸಂಸ್ಥೆಗಳು” RUDSET ವಿಷಯ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು ಹಿರಿಯ ಪ್ರಾಧ್ಯಾಪಕರಾದ ಡಾ.ಬಸವರಾಜ ಕೊಂಬಿನ್ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸತೀಶಕುಮಾರ ಗಾಯಕವಾಡ್, ಮಲ್ಲಿಕಾರ್ಜುನ ಝಳಕಿ,ಡಾ.ಶಿವಕುಮಾರ ಬಿರಾದರ IQAC ಸಂಯೋಜಕರಾದ ಡಾ.ಶಿಲ್ಪಾ ಗಾಂವಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಪಾಟೀಲ ನಿರ್ವಹಿಸಿದರು ಬೋಧಕ- ಬೋದಕೆತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು