ಕ್ಯಾನ್ಸರ್ ಕಾಯಿಲೆಯ ಬಗ್ಗೆ ಸೂಕ್ತ ತಿಳುವಳಿಕೆ ಅಗತ್ಯ

0
248

ಕಲಬುರಗಿ: ವಯಸ್ಸು, ಲಿಂಗ, ಅನುವಂಶೀಯತೆ, ಪರಿಸರದ ಅಂಶಗಳು, ರಾಸಾಯನಿಕ, ವಿಷಪೂರಿತ ಆಹಾರ, ತಂಬಾಕು, ತಂಬಾಕು, ಆಲ್ಕೋಹಾಲ್ ಇವುಗಳ ಸೇವನೆ, ಎಚ್.ಸಿ.ಬಿ, ಎಚ್.ಬಿ.ವಿ, ಇ.ಬಿ.ವಿ ಬ್ಯಾಕ್ಟಿರೀಯಾ, ಕೆಲವು ಔಷಧಗಳ ನಿರಂತರ ಸೇವನೆಯಂತಹ ಮುಂತಾದ ಕಾರಣಗಳಿಂದ ಕ್ಯಾನ್ಸರ್ ರೋಗ ಬರುತ್ತದೆ. ಕ್ಯಾನ್ಸರ್ ಕಾಯಿಲೆಯ ಬಗ್ಗೆ ಅನಾವಶ್ಯಕವಾಗಿ ಭಯ ಪಡದೆ, ಅದರ ಲಕ್ಷಣಗಳು ಕಂಡುಬಂದಲ್ಲಿ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಮುಖವಾಗಲು ಸಾಧ್ಯವಿದೆ. ಕ್ಯಾನ್ಸರ್ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ ಎಂದು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ವಿ.ಟಿ.ಎಸ್.ಎಂ.ಪಿ.ಸಿಸಿಯ ನರ್ಸಿಂಗ್ ಸುಪರಿಟೆಂಡೆಂಟ್ ಕನಕಪ್ಪ ದಾಸ್ ಹೇಳಿದರು.

ನಗರದ ಆಳಂದ ರಸ್ತೆಯ ಕೆಎಚ್‍ಬಿ ಗ್ರೀನ್ ಪಾರ್ಕ ಬಡಾವಣೆಯ ಹನುಮಾನ ದೇವಸ್ಥಾನದ ಆವರಣದಲ್ಲಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಇವುಗಳ ವತಿಯಿಂದ ತಾವು ಬಡ್ತಿ ಹೊಂದಿರುವುದು ಮತ್ತು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಶನಿವಾರ ಸಂಜೆ ತಮಗೆ ಏರ್ಪಡಿಸಿದ್ದ ‘ಸಾಧನಾ ಗೌರವ’ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಆಧುನಿಕ ಒತ್ತಡದ ಬದುಕಿನಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ದೇಹದಲ್ಲಿ ಜೀವಕೋಶಗಳ ಅಸಾಮಾನ್ಯ ಬೆಳವಣಿಗೆಯಾಗುತ್ತವೆ. ಕ್ಯಾನ್ಸರ್‍ನಲ್ಲಿ ಬಹಳಷ್ಟು ಪ್ರಕಾರಗಳಿವೆ. ಚರ್ಮದಲ್ಲಿ ಗಂಟು ಹಾಗೂ ಹಳದಿ ಬಣ್ಣಕ್ಕೆ ತಿರುಗುವುದು, ತೂಕದಲ್ಲಿ ಹೆಚ್ಚಳ ಅಥವಾ ನಷ್ಟ, ಉಸಿರಾಟದ ತೊಂದರೆ, ನಿರಂತರವಾದ ಕೀಲುನೋವು, ರಕ್ತಸ್ರಾವವಾಗುವುದು ಲಕ್ಷಣಗಳಾಗಿವೆ. ಆರಂಭದಲ್ಲಿ ಇದನ್ನು ಗುರ್ತಿಸಿ, ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯವಿದೆ. ಕ್ಯಾನ್ಸರ್ ರೋಗಿಗಳ ಬಗ್ಗೆ ಕೀಳರಿಮೆ ಬೇಡ. ಭಯ ಬೇಡ, ಮುಂಜಾಗ್ರತೆ ವಹಿಸಿ. ಅವರಿಗೆ ಮಾನಸಿಕ ಧೈರ್ಯ ನೀಡಿದರೆ, ಅರ್ಧ ಕಾಯಿಲೆ ವಾಸಿಯಾದಂತೆ ಎಂದು ತಿಳಿಸಿದರು.

ಪಿಎಫ್ ಕಚೇರಿಯ ವಿಭಾಗೀಯ ಮೇಲ್ವಿಚಾರಕ ಬಸವರಾಜ ಹೆಳವರ ಯಾಳಗಿ ಮಾತನಾಡಿ, ಕನಕಪ್ಪ ದಾಸ್ ಅವರು ಕಳೆದ ಅನೇಕ ವರ್ಷಗಳಿಂದ ಕ್ಯಾನ್ಸರ್ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ. ಅವರಲ್ಲಿ ಮಾನಸಿಕ ಸ್ಥೈರ್ಯ ನೀಡಿ, ಭಯವನ್ನು ಹೋಗಲಾಡಿಸಿ, ಅನೇಕರ ಜೀವವನ್ನು ಉಳಿಸುವಲ್ಲಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಿಸಿದರೆ, ವೈದ್ಯರನ್ನು ದೇವರೆಂದು ಕರೆದಿರುವುದು ಇಂತಹವರನ್ನು ನೋಡಿಯೇ ಎಂದು ಭಾಸವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಬಾಲಕೃಷ್ಣ ಕುಲಕರ್ಣಿ, ಸಂಗಮೇಶ್ವರ ಸರಡಗಿ, ಶಿವಕಾಂತ ಚಿಮ್ಮಾ, ಶ್ರೀನಿವಾಸ ಬುಜ್ಜಿ, ಮಲ್ಲಿನಾಥ ಮುನ್ನಳ್ಳಿ, ಚನ್ನಪ್ಪ ಮಳ್ಳಿ, ರವೀಂದ್ರ ಗುತ್ತೇದಾರ, ಪ್ರಕಾಶ ಕುಲಕರ್ಣಿ, ಸಿದ್ರಾಮಪ್ಪ ಬಿರಾದಾರ, ಜೀತೇಂದ್ರಸಿಂಗ ಠಾಕೂರ್, ವೀರಯ್ಯ ಹಿರೇಮಠ, ವಿನೋದ ಪಡನುರ್, ಬಸವರಾಜ ಬಡಿಗೇರ, ಜಗನಾಥ ಘಾಟೆ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here