ಪೀಠ ಬೇಡ, ಸಂಶೋಧನಾ ಕೇಂದ್ರ ಸ್ಥಾಪಿಸಿ; ಕಡಕೋಳ ಶ್ರೀ ಮಠದ ಡಾ. ರುದ್ರಮುನಿ ಶಿವಾಚಾರ್ಯರರು ಆಗ್ರಹ

0
43

ಕಲಬುರಗಿ: ಕಡಕೋಳದಲ್ಲಿಯೇ ‘ತತ್ವಪದಕಾರ ಶ್ರೀ ಕಡಕೋಳ ಮಡಿವಾಳೇಶ್ವರರ ಅಧ್ಯಯನ ಸಂಶೋಧನಾ ಕೇಂದ್ರ’ವನ್ನು ಸರಕಾರ ಸ್ಥಾಪನೆ ಮಾಡಬೇಕು ಎಂದು ಶ್ರೀ ಕಡಕೋಳ ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿ ಡಾ.ರುದ್ರಮುನಿ ಶಿವಾಚಾರ್ಯರರು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರ ಮಂಡಿಸಿದ 15ನೇ ಬಜೆಟ್‌ನಲ್ಲಿ ಘೋಷಿಸಲಾದ ‘ತತ್ವಪದಕಾರರು ಮತ್ತು ಸೂಫಿಗಳ ಬದುಕು ಮತ್ತು ಸಂದೇಶಗಳ’ ಅಧ್ಯಯನ ಕೈಗೊಳ್ಳಲು ಕಲಬುರಗಿ ವಿವಿಯಲ್ಲಿ ಪೀಠಗಳ ಸ್ಥಾಪನೆಗೆ ಮುಂದಾಗಿರುವುದು ಸೂಕ್ತವೆನಿಸುತ್ತಿಲ್ಲ. ಕಲ್ಯಾಣ ಕರ್ನಾಟಕದ ತತ್ವಪದ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಕಡಕೋಳ ಮಡಿವಾಳೇಶ್ವರರು ಅಗ್ರಗಣ್ಯರು. ಆದರೆ ಸಾಮೂಹಿಕವಾಗಿ ತತ್ವಪದಕಾರರಲ್ಲಿ ಕಡಕೋಳ ಮಡಿವಾಳಪ್ಪರನ್ನು ಸೇರಿಸಿ ಪೀಠ ಸ್ಥಾಪನೆಗೆ ಮುಂದಾಗಿರುವುದು ಕಡಕೋಳ ಮಡಿವಾಳಪ್ಪನಿಗೆ ಮಾಡಿದ ಮಹಾ ಅಪಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಸಿಎಂ ಸಿದ್ದರಾಮಯ್ಯ ಹಾಗೂ ಈ ಭಾಗದ ಸಚಿವರು, ಶಾಸಕರು ಕಲ್ಯಾಣ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಡಕೋಳ ಗ್ರಾಮದಲ್ಲಿ ‘ತತ್ವಪದಕಾರ ಶ್ರೀ ಕಡಕೋಳ ಮಡಿವಾಳೇಶ್ವರರ ಅಧ್ಯಯನ ಸಂಶೋಧನಾ ಕೇಂದ್ರ’ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು, ಅನುಯಾಯಿಗಳು ಮತ್ತು ಭಕ್ತರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here