ಫೋಟೋಗ್ರಾಫೇರ್ ಸಂಘದಿಂದ ಸಂವಿಧಾನ ಪೀಠಿಕೆ ವಿತರಣೆ ಜಾಗೃತಿ ಅಭಿಯಾನ

0
79

ಕಲಬುರಗಿ: ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತು ಫೋಟೋಗ್ರಾಫೇರ್ ಸಂಘದ ವತಿಯಿಂದ ಹಮ್ಮಿಕೊಂಡ ಸಂವಿಧಾನ ಪೀಠಿಕೆ ಭಾವಚಿತ್ರ ವಿತರಣಾ ಮತ್ತು ಜಾಗ್ರತಿ ಅಭಿಯಾನದ ಅಂಗವಾಗಿ ಇಂದು, ನಗರದಲ್ಲಿ ವಿವಿಧ ಶಾಲೆಗಳಿಗೆ ತೆರಳಿ ನೀಡುವ ಕಾರ್ಯಕ್ರಮ ಪ್ರಯುತ್ತ ಮಾಣಿಕ ಪ್ರಭು ಬಡಾವಣೆಯ ಅಪರಾಜಿತ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಯಲ್ಲಿ ವಿತರಿಸಲಾಯಿತು.

ವೇದಿಕೆ ಮೇಲೆ ಜೈ ಭವಾನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭಂಡಾರಿ ರಾಜಗೋಪಾಲ, ಸಂಘದ ಅಧ್ಯಕ್ಷ ಆನಂದ ನರೋನಾ ಅಧ್ಯಕ್ಷತೆ ವಹಿಸಿದ್ದರು, ನೇಕಾರ ಬಳಗದ ಹಿರಿಯ ಸಾಹಿತಿ ಮತ್ತು ಲೇಖಕರು ಆದ, ಸೂರ್ಯಕಾಂತ ಸೊನ್ನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸಂಘದ ಕಾರ್ಯದರ್ಶಿಗಳಾದ ರಾಜು ಕೋಷ್ಟಿ ಸ್ವಾಗತಿಸಿದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಮಾತನಾಡಿದರು, ಪೀಠಿಕೆ ಸ್ವೀಕರಿಸಿ ಮಾತನಾಡಿದ ಭಂಡಾರಿ ಯವರು ನಿಮ್ಮ ಸಂಘದ ಕಾರ್ಯ ಸ್ಲಾಘನೀಯ ಎಂದರು.

ನೀವು ನೀಡಿದ ಪೀಠಿಕೆ ಭಾವಚಿತ್ರವನ್ನು ನಮ್ಮ ಶಾಲೆಯಲ್ಲಿಯ ಅವರಣ ದಲ್ಲಿ ಹಾಕಿ ಎಲ್ಲರೂ ಅರಿವು ಮತ್ತು ಜಾಗ್ರತಿ ಮೂಡುವ ಕೆಲಸ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಕೂಡಾ ಮಾಡುವಂತೆ ಸೂಚಿಸುತ್ತದೆ ಎಂದರು.

ಸೊನ್ನದ ಸೂರ್ಯಕಾಂತ ರವರು ಮಾತನಾಡಿ ಇನ್ನೂ ವಿಸ್ತಾರವಾಗಿ ಬರೆಯುವ ಇಚ್ಛೆಯನ್ನು ಅಂಬೇಡ್ಕರ್ ಹೊಂದಿದ್ದರು ಎಂದರು, ನ್ಯಾಯವಾದಿ ಜೇ. ವಿನೋದ ಕುಮಾರ ನಿರೂಪಿಸಿದರು, ಕಾರ್ಯಕ್ರಮ ದಲ್ಲಿ ಡಾ.ಬಸವರಾಜ ಚನ್ನಾ, ಶ್ರೀನಿವಾಸ ಬಲಪೂರ್ ಸಂಸ್ಥೆಯ ಪೋಷಕ ದಯಾನಂದ ಏಕಬೋಟ, ಮ್ಯಾಳಗಿ ಚಂದ್ರಶೇಖರ್ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here