ಗಾಣಿಗ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಜಿಲ್ಲಾ ಅಧ್ಯಕ್ಷ ಬಿಲ್ಲಾಡ

0
333

ಕಲಬುರಗಿ: ಇಂಡಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿ ಜೀ ಅವರ ಭವನದ ಭೂಮಿ ಪೂಜೆ ಮತ್ತು ಗಾಣಿಗ ಸಮಾಜ ಮಹಾ ಸಮಾವೇಶ ಶನಿವಾರ ಬೆಳಿಗ್ಗೆ 10.30.ಕ್ಕೆ ನಡೆಯಲಿದೆ.

ಕಲಬುರಗಿ ಜಿಲ್ಲೆಯಿಂದ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಭಾಗವಹಿಸಬೇಕೆಂದು ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷರಾದ ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ ಅವರು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಸಮಾಜದ ಏಳಿಗೆ ಮತ್ತು ಸಂಘಟನೆಯ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡುವ ಉದ್ದೇಶದಿಂದ ಈ ಸಮಾವೇಶ ಬಹಳಷ್ಟು ಮಹತ್ವವಾಗಿದೆ. ನಮ್ಮ ಜಿಲ್ಲೆಯಿಂದ ಇಂಡಿಗೆ ಸಾವಿರಾರು ಸಮಾಜದ ಬಂಧುಗಳು ಸ್ವಯಂ ಪ್ರೇರಿತ ಮತ್ತು ಸಮಾಜ ಹಿರಿಯರು, ಯುವಕರು ಭಾಗವಹಿಸಲು ಉತ್ಸಾಹ ಹೆಚ್ಚು ಆಗಿದೆ ಎಂದು ಹೇಳಿದರು.

ಸಮಾಜದ ಹಿರಿಯರು ಬಸವರಾಜ ಕುಕನೂರು, ಬಸವರಾಜ ಅವರಾದಿ, ಈಶ್ವರಗೌಡ ಮಾಲಿಪಾಟೀಲ, ಅಶೋಕ ಪಾಟೀಲ ಅತನೂರ, ಮಹಾಂತೇಶ ಕೊಣ್ಣೂರ, ಚಂದ್ರಕಾಂತ ಗೌಡರ್, ವಿಠ್ಠಲ ಸಿದ್ಧನವರ್, ವೀರೇಶ ಕಲಶೇಟ್ಟಿ, ರವೀಂದ್ರ ಕಾಚಾಪುರ, ಸುಭಾಷ, ನಾಗಣ್ಣ, ಬಿ.ಎಂ.ಪಾಟೀಲ ಕಲ್ಲೂರ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here