ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ ಶಾಸಕ ಆರ್.ವಿ ನಾಯಕಗೆ ಶ್ರದ್ಧಾಂಜಲಿ

0
7

ಸುರಪುರ:ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ವತಿಯಿಂದ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ.ಮೊದಲಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ,ಮೇಣದ ಬತ್ತಿ ಬೆಳಗಿ ಎರಡು ನಿಮಿಷಗಳ ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಹೆಚ್.ಪಾಟೀಲ್ ದೇವಾಪುರ,ಉಪಾಧ್ಯಕ್ಷ ನಿಂಗಣ್ಣ ಕೆಂಗುರಿ ಕವಡಿಮಟ್ಟಿ,ನಿರ್ದೇಶಕರಾದ ರಾಮನಗೌಡ ಸುಬೇದಾರ,ವಾಮನರಾವ್ ದೇಶಪಾಂಡೆ,ರಾಜಾ ಸುಭಾಷ್ಚಂದ್ರ ನಾಯಕ,ಬಸಣ್ಣ ಎನ್ ಕಮತಗಿ,ರಾಮಚಂದ್ರ ಪೂಜಾರಿ,ಶೆಟ್ಟಿ ನಾಯಕ,ಬ್ಯಾಂಕ್ ರೈತ ಸದಸ್ಯರಾದ ಶರಣಗೌಡ ಪಾಟೀಲ್ ದೇವಾಪುರ,ಮಹ್ಮದ್ ಯೂಸೂಫ್ ದೇವಾಪುರ,ಹೈಯ್ಯಾಳಪ್ಪ ದೇವಿಕೇರಾ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here