ಸುರಪುರ: ಕ್ಷೇತ್ರದ ಶಾಸಕರು ಹಾಗೂ ಕೃಷಿಕರ ಪರವಾಗಿ ಸದಾಕಾಲ ಮಿಡಿಯುತ್ತಿದ್ದ ಹಿರಿಯ ರಾಜಕಾರಣಿ ಹಾಗೂ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನ ತುಂಬಾ ನೋವು ಮೂಡಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಶೋಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸತ್ಯಂಪೇಟೆಯಲ್ಲಿ ಮಾತನಾಡಿರುವ ಅವರು,ಅವರ ನಿಧನದ ಸುದ್ದಿ ಕೇಳಿದಾಗ ಒಂದು ಕ್ಷಣ ದಿಗ್ಭ್ರಮೆಯಾಯಿತು,ನಂಬಲು ಸಾಧ್ಯವಾಗಲಿಲ್ಲ,ಇದು ಸುದ್ದಿ ಸುಳ್ಳಾಗಲಿ ಎಂದು ಅನಿಸಿತು,ಅವರು ಇನ್ನೂ ಅನೇಕ ಕಾಲ ನಮ್ಮೊಂದಿಗಿದ್ದು ಕ್ಷೇತ್ರದ ಸೇವೆ ಮಾಡಬೇಕಿತ್ತು. ಅವರು ಸದಾಕಾಲ ರೈತರ ಪರ,ರೈತರಿಗಾಗಿ ಹೋರಾಟ ಮಾಡುತ್ತಿದ್ದ ವ್ಯಕ್ತಿ ಅವರು,ನಾವು ಸಂಘಟನೆಯ ಮೂಲಕ ಯಾವುದೇ ಮನವಿ ಸಲ್ಲಿಸಿದರು ತಕ್ಷಣಕ್ಕೆ ಸ್ಪಂಧಿಸುತ್ತಿದ್ದರು,ಅವರ ನಿಧನದ ಸುದ್ದಿ ತುಂಬಾ ಆಘಾತ ಮೂಡಿಸಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ವಕೀಲ ಸಂಗಣ್ಣ ಗುಳಗಿ,ಮಲ್ಕಣ್ಣ ಚಿಂತಿ, ಚನ್ನಮಲ್ಲಿಕಾರ್ಜುನ ಗುಂಡಾನೂರ,ಹಣಮಂತ ಕೊಂಗಂಡಿ,ಶಿವರುದ್ರ ಉಳ್ಳಿ,ಬನಶಂಕರ ಬೋನಾಳ,ಮಂಜುನಾಥ ಸ್ವಾಮಿ ಸೇರಿದಂತೆ ಅನೇಕರಿದ್ದರು.