ರಾಜಾ ವೆಂಕಟಪ್ಪ ನಾಯಕರ ನಿಧನ ಕ್ಷೇತ್ರಕ್ಕೆ ದೊಡ್ಡ ನಷ್ಟ

0
14

ಸುರಪುರ: ಶಾಸಕರು ಹಾಗೂ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನ ನಮ್ಮ ಸುರಪುರ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವುಂಟಾಗಿದೆ ಎಂದು ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಮಾತನಾಡಿದರು.

ನಗರದ ಡಿಸಿಸಿ ಬ್ಯಾಂಕ್ ತಾಲೂಕು ಶಾಖೆಯಲ್ಲಿ ನಡೆದ ನುಡಿ-ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ರಾಜಾ ವೆಂಕಟಪ್ಪ ನಾಯಕ ಅವರು ಕಳೆದ ಮೂರು ದಶಕಗಳಿಂದ ಕ್ಷೇತ್ರದ ಅಭಿವೃಧ್ಧಿಗೆ ಶ್ರಮಿಸಿದವರು,ಅವರು ಎಂದೂ ಕೊಟ್ಟ ಮಾತನ್ನು ತಪ್ಪದ ಮಹಾನ್ ವ್ಯಕ್ತಿಯಾಗಿದ್ದು,ಇಂದು ಅವರನ್ನು ಕಳೆದುಕೊಂಡು ಎಲ್ಲರು ದುಖಃ ಪಡುವಂತಾಗಿದೆ.ಕ್ಷೇತ್ರದಲ್ಲಿನ ಶಾಲೆ,ರಸ್ತೆ,ಕುಡಿಯುವ ನೀರು,ಕೃಷಿ ಹೀಗೆ ಎಲ್ಲಾ ರಂಗಗಳ ಅಭೀವೃಧ್ಧಿಗೆ ಸದಕಾಲ ಶ್ರಮಿಸಿದ ಮಹಾನ್ ಚೇತನರು ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸದಾಕಾಲ ಎಲ್ಲರು ಪ್ರಾರ್ಥಿಸೋಣ ಎಂದರು.

Contact Your\'s Advertisement; 9902492681

ಸಭೆಯ ಆರಂಭದಲ್ಲಿ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಮೇಣದ ಬತ್ತಿಯನ್ನು ಬೆಳಗಿ ಎರಡು ನಿಮಿಷಗಳ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.ಈ ಸಂದರ್ಭದಲ್ಲಿ ಬ್ಯಾಂಕ್ ಡಿಸಿಸಿ ಬ್ಯಾಂಕ್ ತಾಲೂಕು ಶಾಖೆ ವ್ಯವಸ್ಥಾಪಕರಾದ ಬಸವರಾಜ ಕುಂಬಾರ ಹಾಗೂ ತಾಲೂಕಿನ ವಿವಿಧ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು ಭಾಗವಹಿಸಿ ನುಡಿ-ನಮನ ಸಲ್ಲಿಸಿದರು.

ಸಭೆಯಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವರುದ್ರ ಉಳ್ಳಿ ಸತ್ಯಂಪೇಟೆ,ವಿವಿಧ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಕಾರ್ಯದರ್ಶಿಗಳಾದ ಮಲ್ಲು ಬಾದ್ಯಾಪುರ,ಬಲಭೀಮ ಮಾಲಗತ್ತಿ,ಜಗದೀಶ ಸೂಗುರ,ಖಾನಾಪುರ ಯೂನಿಯನ್ ಕಾರ್ಯದರ್ಶಿ ಬಸವರಾಜ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here