ವಾಡಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಕಳ್ಳತನ: ಆರೋಪಿ ಬಂಧನ

0
13

ವಾಡಿ; ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರೈಲು ಪ್ರಯಾಣಿಕರಿಂದ ಹಣ, ಚಿನ್ನ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಪೊಲೀಸರು ಮಾ.7 ರಂದು ರಾತ್ರಿ 7 ಗಂಟೆ 30 ನಿಮಿಷಕ್ಕಿಂತ ಬಂಧಿಸಿ ಹಣ, ಆಭರಣ ವಶಕ್ಕೆ ಪಡೆದಿದ್ದಾರೆ.

ಕಲಬುರಗಿಯ ಮಿಜಗೋರಿ ಕಟ್ಟಾ ನಿವಾಸಿ ಇಮ್ರಾನ್ ಸುಪಿಯಾನ್(19) ಬಂಧಿತ ಆರೋಪಿ. ಬಂಧಿತನಿಂದ 2 ಲಕ್ಷ ಮೌಲ್ಯದ ಬಂಗಾರದ ಸ್ಟೋನ್, 90 ಸಾವಿರ ಮೌಲ್ಯದ ಚಿನ್ನದ ಪಾಟಲಿ, ಬೆಳ್ಳಿ ಉಂಗುರ, ಎರಡು ದೇವರ ಬೆಳ್ಳಿಯ ಮೂರ್ತಿ, ಮೊಬೈಲ್ ಫೋನ್‌ ಹಾಗೂ ನಗದು ಸೇರಿ ಒಟ್ಟು ಒಟ್ಟು 3.01 ಲಕ್ಷ ಮೌಲ್ಯ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಮಹೇಮೂದ್ ಪಾಷಾ ತಿಳಿಸಿದರು.

Contact Your\'s Advertisement; 9902492681

ಸಿಬ್ಬಂದಿ ಮಹ್ಮದ್ ರಫೀಕ್, ಪರಶುರಾಮ ರೆಡ್ಡಿ, ಬಾವಾ ಸಾಬ್, ವಿಶ್ವನಾಥ, ಅನೀತಾ ಸ್ವಾಮಿ, ರಾಹುಲ್, ಬಸವರಾಜ್, ರಾಜಾನಾಯಕ, ಕಾವೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here