ಗುಡ್ಡದಲ್ಲಿ ಚಿರತೆ ಇರುವ ಅನುಮಾನ ಸ್ಥಳಕ್ಕೆ ತಹಸಿಲ್ದಾರ್ ಭೇಟಿ

0
9

ಸುರಪುರ: ತಾಲೂಕಿನ ದೇವರಗೋನಾಲ ಸಿದ್ದಾಪುರ ಬೊಮ್ಮನಹಳ್ಳಿ ಬಳಿಯಲ್ಲಿನ ಗುಡ್ಡದಲ್ಲಿ ಚಿರತೆ ಇರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟು ಕ್ಯಾಮರಾ ಅಳವಡಿಸಿ ಚಿರತೆ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದು,ಸ್ಥಳಕ್ಕೆ ತಹಸಿಲ್ದಾರ್ ಕೆ.ವಿಜಯಕುಮಾರ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು.

ದೇವರಗೋನಾಲ ಬಳಿಯ ಪ್ರಕೃತಿ ಫಾರ್ಮ್ ಹೌಸ್ ಬಳಿಯಲ್ಲಿದ್ದ ನಾಯಿಯನ್ನು ಚಿರತೆ ಹಿಡಿದುಕೊಂಡು ಹೋಗಿದ್ದ ಸ್ಥಳಕ್ಕೂ ತಹಸಿಲ್ದಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.ಅಲ್ಲದೆ ಸ್ವತಃ ತಾವೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುಡ್ಡದಲ್ಲಿ ಸುತ್ತಾಟ ನಡೆಸಿ ಚಿರತೆಯ ಓಡಾಡಿದೆ ಎನ್ನಲಾದ ಸ್ಥಳವನ್ನು ವೀಕ್ಷಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ಬುರ್ರಾನುದ್ದಿನ್,ಶರಣಪ್ಪ ಕುಂಬಾರ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ,ಗ್ರಾಮ ಲೆಕ್ಕಾಧಿಕಾರಿ ಪ್ರದೀಪ ನಾಲ್ವಡೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here