ಸೀರತ್ ಉನ್ ನಬಿ ಪ್ರತಿಭಾ ಪುರಸ್ಕಾರ: 75 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2 ಲಕ್ಷ ರೂ ಪ್ರತಿಭಾ ಪುರಸ್ಕಾರ ವಿತರಣೆ

0
90

ಕಲಬುರಗಿ: ಕರ್ನಾಟಕ ಸೀರತ್ ಉನ್ ನಬಿ ಸ್ಟಡೀ ಮತ್ತು ರಿಸರ್ಚ್ ಸೆಂಟರ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮರ್ಖಜಿ ಸೀರತ್ ಸಮಿತಿ ಹಾಗೂ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಗರದ ಮೊಗಲ್ ಗಾರ್ಡನ್ ದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರತಿ ವರ್ಷದಂತೆ ವಿತರಿಸಲಾಯಿತು.

ಖುರಾನ್ ದಲ್ಲಿ ಪ್ರವಾದಿ‌ ಮೊಹಮ್ಮದ ಕುರಿತ ಆಯೋಹಿಸಲಾದ ಪ್ರಬಂಧ, ಖುರಾನ್ ಕ್ವೀಜ್, ಸೀರತ್ ಕ್ವೀಜ್ ಹಾಗೂ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ತಲಾ ಆರು‌ ಸಾವಿರ, ನಾಲ್ಮು ಸಾವಿರ, ಮೂರು ಸಾವಿರ, ಎರಡು ಸಾವಿರ ಬಹುಮಾನ ಪುರಸ್ಕರಿಸಲಾಯಿತು.

Contact Your\'s Advertisement; 9902492681

ವಿವಿಧ ಸ್ಪರ್ಧೆಗಳಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪಠ್ಯೇತರ ಸಲಕರಣೆ ಸ್ಕೂಲ್ ಬ್ಯಾಗ್, ಟೀಫಿನ್ ಬಾಕ್ಸ್, ಕಂಪಾಸ್ , ನೋಟ್ ಬುಕ್ ಸೇರಿದಂತೆ ಇತರ ಸಾಮಾಗ್ರಿಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಖಾಜಾ ಬಂದೇನವಾಜ್ ದರ್ಗಾದ ಮುಫ್ತಿ ಸೈಯದ್ ಅಬ್ದುಲ್ ರಸೀದ ಮತ್ತು ಖಾಲಿದ್ ಸೈಫುಲ್ಲಾ ರಹಿಮಾನರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಸ್ಲಿಂ ಪಸ್ರ್ನಲ್ ಲಾ ಬೋರ್ಡ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೌಲಾನಾ ಖಾಲಿದ ಸೈಫುಲ್ಲಾ ರಹಮಾನಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ ಸೈಯದ್ ಶಾಃ ಗೇಸುದರಾಜ್ ಖುಸ್ರೋ ಹುಸೇನಿ, ಉಸ್ಮಾನಿಯಾ ಯೂನಿವರ್ಸಿಟಿಯ ಅರೆಬಿಕ್ ವಿಭಾಗದ ಮಾಜಿ ಅಧ್ಯಕ್ಷ ಡಾ. ಮುಸ್ತಫಾ ಶರೀಫ್ ಹೈದ್ರಾಬಾದ್, ಸಫಾ ಬೈತುಲ್ ಮಾಲ್ ಹೈದ್ರಾಬಾದ್ ಅಧ್ಯಕ್ಷ ಮತ್ತು ಮೆಂಬರ-ಓ-ಮೆಹರಾಬ ಫೌಂಡೇಷನ್ ಇಂಡಿಯಾದ ಅಧ್ಯಕ್ಷರಾಗಿರುವ ಮೌಲಾನಾ ಗಯಾಸ್ ಅಹ್ಮದ್ ರಶ್ಶಾದಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಖಾಲಿ ಮೌಲಾನಾ ಸೈಫುಲ್ಲಾ ರಹಮಾನಿ ಅವರು ಈ ಸಂದರ್ಭದಲ್ಲಿ ‌ಮಾತನಾಡಿ, ಶಿಕ್ಷಣ ವೇ ಬದುಕಿದೆ ಆಧಾರ.‌ ಶಿಕ್ಷಣ ದಿಂದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ.‌ಹೀಗಾಗಿ ಎಲ್ಲರೂ ಶಿಕ್ಷಣ ಕ್ಕೆ ಹೆಚ್ಚಿನ ಆದ್ಯತೆ ‌ನೀಡಬೇಕೆಂದು ಕರೆ ನೀಡಿದರು.

ಇದೊಂದು ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿದೆ‌ ಎಂದು ಮಹ್ಮದ ಅಜಗರ ಚುಲ್ ಬುಲ್ ಕಾರ್ಯವನ್ನು ಶ್ಲಾಘಿಸಲಾಯಿತು. ಈ ವೇಳೆಯಲ್ಲಿ ಇಂಗ್ಲಿಷ್ ಗೆ ಭಾಷಾಂತರಿಸಿದ ಪುಸ್ತಕಗಳನ್ನು ಚುಲ್ ಬುಲ್ಅವರಿಗೆ ಹಸ್ತಾಂತರಿಸಲಾಯಿತು.

ಸಧ್ಯ ದೇಶದಲ್ಲಿ‌ ಅಲ್ಪಸಂಖ್ಯಾತರ ಹಾಗೂ ದಲಿತ ಮತ್ತು ಹಿಂದುಳಿದ ವರ್ಗದವರು, ಸಂವಿಧಾನದ‌ ಮೇಲೆ ನಂಬಿಕೆ ಇದ್ದವರು ಒಗ್ಗಟ್ಟುವಿದ್ದರೆ ಕೋಮುವಾದ ಶಕ್ತಿ ಗಳಿಗೆ ತಕ್ಕ ಉತ್ತರ ನೀಡಬಹುದಾಗಿದೆ ಎಂದು ಹೇಳಿದರು.

ಕರ್ನಾಟಕ ಸೀರತ್ ಉನ್ ನಬಿ ಸ್ಟಡಿ & ರಿಸರ್ಚ್ ಸೆಂಟರ್ ಅಧ್ಯಕ್ಷ ಮಹ್ಮದ ಅಜಗರ ಚುಲ್ ಬುಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್ ಸನ್ಮಾನಿತರ ಪರಿಚಯ ಓದಿದರು. ಇಂಜನೀಯರ್ ಮುಸ್ತಾಖ್ ಅಹ್ಮದ ನಿರೂಪಿಸಿದರು.‌

ವೇದಿಕೆ‌ ಮೇಲೆ ಸಜ್ಜಾದಗಳು, ಉಲ್ಮಾಗಳು ಬುದ್ದಿ ಜೀವಿಗಳು ಹಾಗೂ ವಿವಿಧ ಸಂಸದ ಅಧ್ಯಕ್ಷರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರು, ವಿದ್ಯಾರ್ಥಿಗಳ ಪಾಲಕರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೌಲಾನಾ ಮೊಹಮ್ಮದ್ ಇಸ್ಮಾಯಿಲ್ ಮುದ್ದಸ್ಸಿರ್, ಅತೀಖ್ ಏಜಾಜ್, ಅಫಜಾಲ್ ಮಹಮೂದ್ ಮತ್ತು ಸೈಯದ್ ಅರ್ಸಲಾನ್ ಅಹ್ಮದ ವಜೀರ ಮತ್ತು ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here