ಮಹಿಳಾ ಜ್ಞಾನವಿಕಾಸ ಕೇಂದ್ರಗಳ ತಾಲೂಕು ಮಟ್ಟದ ವಿಚಾರಗೋಷ್ಠಿ

0
137

ಕಲಬುರಗಿ: ಮಹಿಳಾ ಜ್ಞಾನವಿಕಾಸ ಕೇಂದ್ರಗಳ ತಾಲೂಕು ಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮವು ಕಲಬುರಗಿ ಮಹಾನಗರದ ಕಮಿತಕರ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಶ್ರೀಮತಿ ಲಕ್ಷ್ಮಿ ದತ್ತಾತ್ರೇಯ ಪಾಟೀಲ ರೇವುರವರು ಉದ್ಘಾಟಿಸಿ ಮಹಿಳೆಯರು ಇನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು. ಮಹಿಳೆಯರ ಸಮಾನತೆ ಜೊತೆಗೆ ಸಮಾಜದಲ್ಲಿ ರಾಜಕೀಯವಾಗಿ ಸಾಮಾಜಿಕವಾಗಿ ಸಾಹಿತಿಕವಾಗಿ ಇನ್ನು ಎತ್ತರಕ್ಕೆ ಬೆಳೆಯಬೇಕೆಂದು ಹೇಳಿದರು.

Contact Your\'s Advertisement; 9902492681

ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಅವರು ಕ್ಷೇತ್ರದ ಹಿನ್ನೆಲೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಮಹಿಳಾರು ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಕಲಬುರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಮಹಿಳೆಯರಿಗೆ ಸ್ವಾವಲಂಬಿ ಯಾಗಿ ಬದುಕಲು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಅನುಕೂಲವಾಗಿದೆ ಎಂದು ಹೇಳಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸಿ ಎನ್ ಬಾಬಳಗಾoವ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಚಾರಗೋಷ್ಠಿಯಲ್ಲಿ ಮಹಿಳೆಯರಿಗೆ ಕಾನೂನಿನ ಅರಿವು
ಮಾಲತಿ ರೇಷ್ಮೀ, ಜಿಲ್ಲಾ ಗ್ರಾಹಕ ವೇದಿಕೆ ಅಧ್ಯಕ್ಷರು ಅವರು ಮಹಿಳೆಯರಿಗೆ ಕಾನೂನು ಅಗತ್ಯತೆಗಳು ಏನೂ ಸಮಯ ಸಂದರ್ಭಗಳಲ್ಲಿ ಬರುವ ಸಮಸ್ಯೆ ಗಳಿಗೆ ಕೆಲವು ಅಗತ್ಯ ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾನೂನಾಡಿಯಲ್ಲಿ ಮಹಿಳೆಗೆ ಸಿಗುವ ರಕ್ಷಣೆಗಳ ಕುರಿತು, ಹಾಗೂ ಮಹಿಳೆಯರಿಗಿರುವ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕುಮಾರಿ ಮಾಲಕಣ್ಣಿ. ಶ್ರೀಮತಿ ಸರಸ್ವತಿ ಹೆಬ್ಬಾರ್. ಇದ್ದರು
ಎರಡನೇ ಗೋಷ್ಠಿ ಕ್ಯಾನ್ಸರ್ ಜಾಗೃತಿಯ ಕುರಿತು. ಡಾ. ಶೃತಿ ಕಿದ್ವಾಯಿ ಕ್ಯಾನ್ಸರ್ ಸೆಂಟರ್ ಕಲಬುರಗಿ .ಮಹಿಳೆಯರಲ್ಲಿ ಸರ್ವೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಮತ್ತು ಗರ್ಭ ಕೊರಳಿನ ಕ್ಯಾನ್ಸರನ ಬಗ್ಗೆ ಹಾಗೂ ಕ್ಯಾನ್ಸರಗೆ ಇರುವ ವ್ಯಾಕ್ಸಿನೇಷನ್ ಬಗ್ಗೆ ಹಾಗೂ ಕ್ಯಾನ್ಸರನ ಲಕ್ಷಣ ಮತ್ತು ತಡೆಗಟ್ಟುವ ವಿಧಾನದ ಬಗ್ಗೆ ಮಾಹಿತಿಯನ್ನು ನೀಡಿದರು.

ಡಾ. ಸಂಧ್ಯಾ ಕಾನೇಕರ ಆರೋಗ್ಯದ ಬಗ್ಗೆ ಬಾಯಿಯ ಸುಚಿತ್ವದ ಬಗ್ಗೆ ಹಲ್ಲಿನ ಸುರಕ್ಷತೆಯ ಬಗ್ಗೆ ಹಾಗೂ ಬಾಯಿ ಕ್ಯಾನ್ಸರ್ ನ ಬಗ್ಗೆ ಮಾಹಿತಿಯನ್ನು ನೀಡಿದರು.
ಡಾ. ಜಯಶ್ರೀ ರೆಡ್ಡಿ ಅವರು ಈ ವಿಚಾರಗೋಷ್ಠಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಿವಿಧ ಸ್ವ ದ್ಯೋಗ ಮಾಡಿದ 15 ಸದಸ್ಯರು, ತಿಂಡಿ ತಿನಿಸು, ಬಟ್ಟೆ,ಕರಕುಶಲ ವಸ್ತುಗಳ ಸ್ಟಾಲ್ ಹಾಕಿದರು 26 ಜನ ಕೇಂದ್ರ ಸದಸ್ಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

ಧಾನ್ಯದ ಆರತಿ ತಟ್ಟೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಇದರಲ್ಲಿ 40 ಸದಸ್ಯರು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು ಕೇಂದ್ರ ಮಟ್ಟದಲ್ಲಿವಿವಿಧ ಸ್ವ ದ್ಯೋಗದಲ್ಲಿ ಸಾಧನೆ ಮಾಡಿದ ಹದಿನಾಲ್ಕು ಮಹಿಳೆಯರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪ್ರಾದೇಶಿಕ ಕಚೇರಿ, ಜ್ಞಾನ ವಿಕಾಸ್ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ಶಕುಂತಲಾ ಮೇಡಂ ತಾಲೂಕಿನ ಯೋಜನಾಧಿಕಾರಿಗಳಾದ ಪ್ರವೀಣ್ ಆಚಾರ್ಯಸರ್ ,ಅರ್ಚನಾ ಬಸವರಾಜ ಬಿರಾಳ. ಸುರೇಶ್ ತಂಗಾ. ಮಹಾನಗರ ಪಾಲಿಕೆ ಸದಸ್ಯರು ಹೈದರಾಲಿ ಇನಾಮ್ದಾರ್ ಶ್ರೀಮತಿ ರಜನಿ ಜಗದೀಶ. ಸಂತೋಷ್ ಜವಳಿ, ತಾಲೂಕಿನ ಜ್ಞಾನವಿಕಾ ಸಮನ್ವಯಧಿಕಾರಿ ಮಮತಾ ಕಾರ್ಯಕ್ರಮ ನಿರುಪಿಸಿದರು. ಜಗನ್ನಾಥ್ ಸಿಂಧನೂರ್ ವಂದಿಸಿದರು. ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here