ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ 7 ರಂದು

0
13

ಶಹಾಪುರ: ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಮೈಸೂರಿನ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಎ.ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಈ ಜಂಟಿ ವೇದಿಕೆಗಳ ಅಡಿಯಲ್ಲಿ 7 ರಂದು ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲಾ ಆವರಣ ನಡೆವ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಂಟಿ ವೇದಿಕೆಗಳ ಲೇಖಕರಾದ ಎಂ.ಬಿ.ಸಂತೋಷ ಹಾಗೂ ಖ್ಯಾತ ಹಿರಿಯ ಲೇಖಕಿ ಎ.ಹೇಮಗಂಗಾ ಮೈಸೂರು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಂ.ಬಿ.ಸಂತೋಷ ಅವರ ನೂಪುರ ಹೈಕು ಕೃತಿ, ಲೇಖಕಿ ವಾಣಿ ರಾಘವೇಂದ್ರ ಅವರ ಡಾ.ಸ್ವೇತಾ ಇಂಗ್ಲಿಷ್ ಕಾದಂಬರಿ, ಮತ್ತು ಶೋಭಾ ಬಿ ಅವರ ಭಾವತರಂಗದ ಪಯಣ ಹೀಗೆ ಈ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಲು ಮೈಸೂರಿಗೆ ಅಹ್ವಾನಿತರಾಗಿರುವ‌ ಲೇಖಕ ಸಿದ್ಧರಾಮ ಹೊನ್ಕಲ್ ರ ಒಟ್ಟು ಸಾಹಿತ್ಯ ಸಾಧನೆ ಹಿನ್ನೆಲೆಯಲ್ಲಿ ಅವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರ್ರಶಸ್ತಿ ನೀಡಿ ಗೌರವಿಸಲಿದ್ದೇವೆ ತಿಳಿಸಿದ್ದಾರೆ.

Contact Your\'s Advertisement; 9902492681

ಇದು ಸಾಂಸ್ಕೃತಿಕ ರಾಜಧಾನಿ ಹಳೆ ಮೈಸೂರು ಭಾಗದವರಿಂದ ಕಲ್ಯಾಣ ಕರ್ನಾಟಕಕ್ಕೆ ಸಂದ ಗೌರವ.ಇದು ವೈಯಕ್ತಿಕವಾಗಿ ತಮಗಷ್ಟೆ ಅಲ್ಲ ಎಂದು ಲೇಖಕ ಸಿದ್ಧರಾಮ ಹೊನ್ಕಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here