ಕಲಬುರಗಿ: ಜಾತ್ರಾ ಆಟಿಕೆಯ ತೊಟ್ಟಿಲು ಮುರಿದು ಇಬ್ಬರಿಗೆ ಗಾಯ | ತಪ್ಪಿದ ಅನಾಹುತ

0
72

ಕಲಬುರಗಿ: ನಗರದ ಪ್ರಸಿದ್ಧ ಸಂತ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹಾಕಿರುವ ಆಟಿಕೆಯ ತೊಟ್ಟಿಲು ಮುರಿದು ಇಬ್ಬರಿಗೆ ಗಾಯಗಳಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಜಾತ್ರಾ ಮಹಾತೋತ್ಸವದ ನಿಮಿತ್ತ ಭಾರಿ ಸಂಖ್ಯೆಯಲ್ಲಿ ಜನರು ಮೈದಾನದಲ್ಲಿ ನೆರದಿದರು. ಘಟನೆಯಲ್ಲಿ ಒಬ್ಬ ಮಹಿಳೆಗೆ ಹಾಗೂ ಏಳರಿಂದ ಎಂಟು ವರ್ಷದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದ್ದು, ಘಟನೆಯಲ್ಲಿ ಯಾವುದೇ ರೀತಿಯ ತೀವ್ರತರವಾದ ಗಾಯಗಳಾಗಲಿ ಅಥವಾ ಅಪಘಾತಗಳಾಗಲಿ ಸಂಭವಿಸಿರುವುದಿಲ್ಲ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Contact Your\'s Advertisement; 9902492681

ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೇ ಜಾತ್ರಾ ಮೈದಾನದಲ್ಲಿ ಅಪಾಯಕಾರಿ ಆಟಿಕೆಗಳು ಹಾಕಿರುವುದು ಈ ಅವಘಡಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇತ್ತೀಚೆಗಷ್ಟೇ ಸಣ್ಣ ರಥೋತ್ಸವದ ವೇಳೆ ಹೋಮ್ ಗಾರ್ಡ್ ಚಕ್ರದಡಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿತ್ತು.

ಈ ಕುರಿತು ನಗರದ ರಾಘವೇಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here