ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

0
20

ಶಹಾಬಾದ :ಬಿಜೆಪಿ ಪಕ್ಷವನ್ನು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಲು ಮತ್ತು ಪಕ್ಷವನ್ನು ತಾಲೂಕಿನ ಎಲ್ಲಾ ಕಡೆ ಸಂಘಟಿಸುವ ನಿಟ್ಟಿನಲ್ಲಿ ಶಹಾಬಾದ ಮಂಡಲದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಂಡಲದ ಅಧ್ಯಕ್ಷ ನಿಂಗಪ್ಪ ಹುಳುಗೋಳ್ಕರ ತಿಳಿಸಿದರು.

ಅವರು ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮಂಡಲದ ಅಧ್ಯಕ್ಷರಾಗಿ ನಿಂಗಪ್ಪ ಶಿವಶರಣಪ್ಪ ಹುಳಗೋಳಕರ್, ಉಪಾಧ್ಯಕ್ಷರಾಗಿ ಸಿದ್ರಾಮ ಬಲಭೀಮ ಕುಸಾಳೆ, ಸದಾನಂದ ಈರಣ್ಣ ಕುಂಬಾರ, ಶರಣಪ್ಪ ಬಸಣ್ಣ ಭೋಗಶೆಟ್ಟಿ, ರವಿ ಪಾಂಡು ರಾಠೋಡ, ಮಹಾದೇವ ಕಾಶಪ್ಪ ಗೊಬ್ಬುರಕರ, ಶಶಿಕಲಾ ಶರಣಪ್ಪ ಸಜ್ಜನ.ಪ್ರಧಾನ ಕಾರ್ಯದರ್ಶಿಗಳಾಗಿ ದಿನೇಶ ಸತ್ತೊಬಾ ಗೌಳಿ, ದೇವದಾಸ ಜಾಧವ, ಕಾರ್ಯದರ್ಶಿಗಳಾಗಿ ನಾರಾಯಣ ಕಂದಕೂರ, ರಾಜು ವಿಠಲ ಕುಂಬಾರ, ರಾಜೇಂದ್ರಕುಮಾರ ದೊಂಡಿಬಾ ಮಾನೆ, ಲತಾ ಸಂಜೀವಕುಮಾರ, ಜಯಶ್ರೀ ಸಂಜೀವ ಸೂಡಿ, ನಂದಾ ಬಸವರಾಜ ಗುಡೂರ, ಖಜಾಂಚಿಯಾಗಿ ಕಾಶಣ್ಣಾ ವೀರಣ್ಣ ಚನ್ನೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಪತ್ರಿಕಾ ಗೋಷ್ಠಿಯಲ್ಲಿ ದಿನೇಶ ಗೌಳಿ, ದೇವದಾಸ ಜಾಧವ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಬಸವರಾಜ ಬಿರಾದಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here