ಚೊಂಬು ಕಾಂಗ್ರೆಸ್ ಕೊಡುಗೆ, ಬಿಜೆಪಿಯದು ಅಮೃತ ಕಲಶ: ಬಸವನಗೌಡ ಪಾಟೀಲ್ ಯತ್ನಾಳ್

0
102

ಕಲಬುರಗಿ: ಕಾಂಗ್ರೆಸ್ ಸರಕಾರವು ತನ್ನ ಆಡಳಿತ ಅವಧಿಯಲ್ಲಿ ಹಗರಣ ಲೂಟಿಯಿಂದ ಜನರಿಗೆ ಚೊಂಬು ಕೊಡುಗೆ ಕೊಟ್ಟಿದೆ. ಆದರೆ  ಅಮೂಲ್ಯ ದ್ರವ್ಯಗಳನ್ನು ತುಂಬಿದ ಅಮೃತ ಕಲಶವನ್ನು ಬಿಜೆಪಿ ಕೊಟ್ಟಿದೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಅವರು ಕಾಂಗ್ರೆಸ್ಸಿನ ಮೇಲೆ ನೇರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರವು ಚಂದ್ರಶೇಖರ್ ಅವರನ್ನು ಪ್ರಧಾನಿಯನ್ನಾಗಿ ಮಾಡಿ ದೇಶದ ಬಂಗಾರವನ್ನು ಅಡವಿಟ್ಟು ಭಾರತವನ್ನು ಹೀನಾಯ ಸ್ಥಿತಿಗೆ ತಳ್ಳಿದರು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಜಗತ್ತಿನಲ್ಲಿ ಐದನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಎದ್ದು ನಿಂತಿದೆ ಇನ್ನೊಂದು ಅವಧಿಗೆ ಅಧಿಕಾರ ಕೊಟ್ಟರೆ ದೇಶವನ್ನು ವಿಶ್ವದಲ್ಲಿ ಮೂರನೆಯ ಆರ್ಥಿಕ ರಾಷ್ಟ್ರವಾಗಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ ಬಿಜೆಪಿಯು ಅಮೂಲ್ಯವಾದ ದ್ರವ್ಯಗಳನ್ನು ತುಂಬಿಸಿದ ಅಮೃತ ಕಲಶವನ್ನು ಭಾರತೀಯರಿಗೆ ಕೊಟ್ಟಿದೆ ಎಂದು ಹೇಳಿದರು. ಮೋದಿಯವರು 14 ವರ್ಷ ಗುಜರಾತ್ ಮುಖ್ಯಮಂತ್ರಿ ಹಾಗೂ 10 ವರ್ಷ ದೇಶದ ಪ್ರಧಾನಿ ಆದರೆ ಅವರ ಹುಟ್ಟು ಆದಾಯ ಎರಡು ಕೋಟಿ 30 ಲಕ್ಷ ರೂಪಾಯಿ ಮಾತ್ರ ಆದರೆ ಡಿಕೆ ಸಹೋದರರ ಆದಾಯ 2,000 ಕೋಟಿ ರೂಪಾಯಿ ಆಗಿದೆ. ರಾಮಚಂದ್ರ ಕೊತ್ವಾಲ್ ರಿಗೆ ಸಿಗರೇಟ್ ,ಚಹಾ ಕೊಟ್ಟ ವ್ಯಕ್ತಿಗೆ ಇಷ್ಟು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ಚೊಂಬು ಯಾರು ಕೊಟ್ಟಿದ್ದಾರೆ ಎಂಬುದನ್ನು ಪ್ರಜ್ಞಾವಂತ ಮತದಾರರು ತಿಳಿದುಕೊಳ್ಳುತ್ತಾರೆ.ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಹಣ ಕೊಟ್ಟಿಲ್ಲ ಎಂಬುದು ಶುದ್ಧ ಸುಳ್ಳು ಎರಡು ಲಕ್ಷ 30ಸಾವಿರ ಕೋಟಿ ರೂಪಾಯಿಯನ್ನು 10 ವರ್ಷಗಳಲ್ಲಿ ನೀಡಿದೆ. ಜಿ ಎಸ್ ಟಿ, ಗ್ಯಾಸ್ ಸಬ್ಸಿಡಿ , ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಆಯುಷ್ಮಾನ್ ಭಾರತ್ ಹೀಗೆ ಹಲವು ಯೋಜನೆಗಳಲ್ಲಿ ಹಣವನ್ನು ಕೊಟ್ಟಿದೆ. ಆದರೆ ಕಾಂಗ್ರೆಸ್ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಬಂದ ಹಣವನ್ನು ವಕ್ಫ್ ಆವರಣ ಗೋಡೆ ಕಟ್ಟಲು ನೂರು ಕೋಟಿ ಹಾಗೂ ಮುಸ್ಲಿಮರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂ . ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಎಸ್ ಸಿ – ಎಸ್ ಟಿ ಅಭಿವೃದ್ಧಿಗಾಗಿ ಮೀಸಲಾದ 10 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರೆಂಟಿ ಸ್ಕೀಮ್ ಗಳಿಗೆ ನೀಡಿ ದಲಿತರಿಗೆ ಅನ್ಯಾಯ ಮಾಡಿರುವುದರ ಬಗ್ಗೆ ಸಚಿವರಾದ ಏಚ್‌.ಸಿ ಮಹಾದೇವಪ್ಪ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದ್ದೇನೆ. ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಅಂಬೇಡ್ಕರ್ ಅವರ ಹೆಸರಲ್ಲಿ ಆಣೆ ಮಾಡಿ ಹೇಳಲಿ. ಎಸ್ಸಿ-  ಎಸ್ಟಿ ಹಣ ತೆಗೆದುಕೊಂಡದ್ದಕ್ಕೆ ಪ್ರತಿಭಟನೆಯನ್ನು ಮಾಡಲಿಲ್ಲ ರಾಜೀನಾಮೆಯನ್ನು ಕೊಡಲಿಲ್ಲ. ಗ್ಯಾರೆಂಟಿಗೆ ಬೇರೆ ಹಣ ಹೊಂದಿಸುವ ಬದಲು ದಲಿತರ ಅಭಿವೃದ್ಧಿಯ ಹಣವನ್ನು ಬಳಸಿದ್ದರ ಬಗ್ಗೆ ಪ್ರಿಯಾಂಕ ಖರ್ಗೆ ಯಾಕೆ ಮಾತನಾಡುವುದಿಲ್ಲ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಡಿಕೆ ಶಿವಕುಮಾರ್ ತೆರೆಯ ಮರೆಯಲ್ಲಿ ಸಂಚು ಹೂಡುತ್ತಿರುವುದು ಬಯಲಾಗಿದೆ. ಬಾಗಲಕೋಟೆಯ ಅಭ್ಯರ್ಥಿ ಗೆಲುವಿಗಾಗಿ ಡಿಕೆಯವರ ಪರಮಾಪ್ತ ಶಿವಾನಂದ ಪಾಟೀಲ್ ಮತ್ತು ಸ್ವಾಮೀಜಿಯೊ ಬ್ಬರಿಗೆ ಕರೆ ಮಾಡಿ ಗೆಲ್ಲಿಸಿ ಕೊಡುವಂತೆ ಮತ್ತು ಚುನಾವಣೆಯ ನಂತರ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಡಿಸಿಎಂ ಸಂಚು ಹೂಡಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಬೆಂಬಲಿಸಿದ್ದಾರೆ ಎಂದು ಯತ್ನಾಳ್ ಹೇಳಿದರು. ಕಾಂಗ್ರೆಸ್ ಒಡೆದ ಮನೆಯಾಗಿದ್ದು ಮೈಸೂರು ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಬೆಂಬಲಿಗರನ್ನು ಸೋಲಿಸಲು ಡಿಸಿಎಂ ಹಾಗು ಮಂಡ್ಯ- ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಅಭ್ಯರ್ಥಿ ಸೋಲಿಸಲು ಸಿಎಂ  ಹುನ್ನಾರ ನಡೆಸಿದ್ದಾರೆ. ಚುನಾವಣೆಯ ನಂತರ ವಿಧಾನಸಭೆ ವಿಸರ್ಜನೆ ಖಚಿತ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ಭಯದ ವಾತಾವರಣವಿದ್ದು 2047 ಹೊತ್ತಿಗೆ ಇಸ್ಲಾಂ ರಾಷ್ಟ್ರವನ್ನಾಗಿಸುವ ಕನಸಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ಮಹಿಳೆಯರು ಮಾನ ಮರ್ಯಾದೆಗೆ ಅಂಜಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ.ಹುಬ್ಬಳ್ಳಿ ಮತ್ತು ಗದಗದಲ್ಲಿ ಆಸಿಡ್ ಎರಚಿದ ಘಟನೆ ಇವಕ್ಕೆಲ್ಲ ಸಾಕ್ಷಿಯಾಗಿವೆ .ದೇಶದ ಸುರಕ್ಷಿತಗಾಗಿ ಮೋದಿಯವರ ಜೊತೆ ಇರುವುದು ಉತ್ತಮ ಎಲ್ಲರೂ ಮತದಾನ ಮಾಡಿ ಬೆಂಬಲಿಸಬೇಕು ಎಂದರು.

ಪ್ರಿಯಾಂಕ ಖರ್ಗೆಯವರು ಇನ್ನು ಯುವಕರಿದ್ದೀರಿ ಒಳ್ಳೆಯ ಆಡಳಿತ ಮತ್ತು ದೇಶಕ್ಕಾಗಿ ದುಡಿಯಬೇಕು. ಖರ್ಗೆ – ಧರ್ಮಸಿಂಗ್ ಈ ಭಾಗದಲ್ಲಿ ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿದರೂ  ಅಭಿವೃದ್ಧಿಯಾಗಿಲ್ಲ ಕರದೇವರೇ ನಿಮ್ಮ ಆಸ್ತಿಯಿಂದ ಕನಿಷ್ಠ 500 ಮಂದಿ ದಲಿತರಿಗೆ ತಲಾ ಹತ್ತು ಲಕ್ಷದಂತೆ ನೀಡಿ ಮನೆ ಕಟ್ಟಿಸಿ ಕೊಡಿ. ಕಾಫಿ ತೋಟ, ದುಬೈ ಹೋಟೆಲ್ ಮುಂತಾದ ಆಸ್ತಿಗಳಿಂದ ನಾಲ್ಕಾಣೆಯಷ್ಟು ಪಾಲು ಮಾರಾಟ ಮಾಡಿ ದಲಿತರಿಗೆ ಸಹಾಯ ಮಾಡಿ ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸ್ಟೈಫಂಡ್ ನ ಸುಮಾರು 70 ರಿಂದ 80 ಕೋಟಿ ರೂಪಾಯಿಯನ್ನು ರಾಧಾಕೃಷ್ಣ ದೊಡ್ಡಮನಿಯ ಖಾಸಾ ಮನುಷ್ಯ ನುಂಗು ಹಾಕಿದ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಯತ್ನಾಳ್ ಒತ್ತಾಯಿಸಿದರು.

ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಂ ಪಿ ಬಿ ಎಸ್ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ನಿರತ 300 ವಿದ್ಯಾರ್ಥಿಗಳ ಅಕೌಂಟಿನಿಂದ ಹಣ ಎತ್ತಿದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಮಾಡಬೇಕಾಗಿದೆ. ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆ ಎತ್ತುವ ಕಾಂಗ್ರೆಸ್ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here