ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಬಸವ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಕುರಿತು ರವಿವಾರ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜ ಕಲಬುರಗಿ ಜಿಲ್ಲಾ ಘಟಕದಿಂದ ಪೂರ್ವಭಾವಿ ಸಿದ್ದತಾ ಸಭೆ ಜರುಗಿತು.
ಬಸವ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣ ಆಚರಣೆಯ ಬಗ್ಗೆ ಚರ್ಚಿಸಲಾಯಿತು. ಅಂದು ಪವಿತ್ರ ಕಾಯಕ ಮಾಡುವ ನಿರ್ಮಲ ಹೃದಯದ ಶ್ರೇಷ್ಠ ಶರಣರಾಗಿದ್ದ ಹೆಳವ ಸಮಾಜದ ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯ ಹಾಗೂ ಬಸವ ಭೃಂಗೇಶ್ವರ ಶರಣರ ಭಾವಚಿತ್ರದ ಮೆರವಣಿಗೆ ಮಾಡಲಾಗುವುದು. ಸಮಾಜದ ಎಲ್ಲರೂ ಬಸವ ಉತ್ಸವದಲ್ಲಿ ಭಾಗವಹಿಸಲು ಕರೆ ನೀಡಲಾಯಿತು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿ.ಹೆಚ್. ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ನಾಗಪ್ಪ ಹೆಳವರ, ಮಲ್ಲಿಕಾರ್ಜುನ ಹೆಳವರ, ರಾಜು, ರಾಯಪ್ಪ, ಸುರೇಶ, ನಾಗರಾಜ ಹಾಗೂ ಇನ್ನಿತರ ಯುವಕರು ಭಾಗವಹಿಸಿದ್ದರು.