ಕಲಬುರಗಿ: 891ನೇ ಬಸವ ಜಯಂತಿ ಅಧ್ಯಕ್ಷನಾಗಿ ಸಮುದಾಯದ ಸೇವೆ ಸಲ್ಲಿಸಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಅನಂತ ಅನಂತ ಕೋಟಿ ಕೋಟಿ ಶರಣು ಶರಣಾರ್ಥಿಗಳು ಎಂದು ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ವಿನೋದ್ ಆರ್ ಪಾಟೀಲ್ ಸರಡಗಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು ನಗರದಲ್ಲಿ ಐತಿಹಾಸಿಕವಾಗಿ ಮತ್ತು ವಿಶೇಷವಾಗಿ 3 ದಿನಗಳ ಕಾಲ ನಡೆದ ಬಸವ ಜಯಂತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದು ನನ್ನ ಪುಣ್ಯವೆಂದು ಭಾವಿಸುತ್ತ ಈ ಕಾರ್ಯಕ್ರಮದಲ್ಲಿ ನನಗೆ ಸಹಕರಿಸಿದ ನನ್ನ ಹಿರಿಯರಿಗೂ, ಮಾರ್ಗದರ್ಶಕರಿಗೂ ಹಾಗೂ ರಾಜಕೀಯ ದುರಿಣರಿಗೂ ಹಾಗೂ ನನ್ನ ಎಲ್ಲಾ ಬಂಧು ಮಿತ್ರರಿಗೋ ಮತ್ತು ಸಮುದಾಯದ ಬಂಧುಗಳಿಗೂ ಮತ್ತು ಬಸವಅಭಿಮಾನಿಗಳು ಮತ್ತು ಮಾಧ್ಯಮ ರಂಗದವರಿಗೂ ಶರಣು ಶರಣಾರ್ಥಿಗಳು, ತಮ್ಮ ಮಾರ್ಗದರ್ಶನ, ಶುಭಹಾರೈಕೆ, ಸಲಹೆ ನಿತ್ಯ ನಿರಂತರವಾಗಿರಲಿ ಎಂದು ತಿಳಿಸಿದ್ದಾರೆ.