ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಸಂಸದ ಡಾ. ಉಮೇಶ್ ಜಾಧವ್ ಗೆ ಬೆಂಬಲ

0
318

ಕಲಬುರಗಿ: ಭಾರತೀಯ ಜನತಾ ಪಕ್ಷದಲ್ಲಿರುವ ನಮ್ಮ ಬಂಜಾರ ಸಮಾಜದ ಏಕೈಕ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಂಸದ ಡಾ. ಉಮೇಶ್ ಜಾದವ್ ರವರಿಗೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ವತಿಯಿಂದ ನಮ್ಮ ಬೆಂಬಲವನ್ನು ಘೋಷಿಸುತ್ತಿದೆ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಶಂಕರ್ ಪವಾರ್ ಹೇಳಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕಳೆದ ಐದು ದಿನಗಳಿಂದ ಕಲ್ಬುರ್ಗಿ ಕ್ಷೇತ್ರದಲ್ಲಿ ಸುಮಾರು ನೂರಕ್ಕೂ ಹೆಚ್ಚು ತಾಂಡಾಗಳಿಗೆ ಭೇಟಿ ನೀಡಿದ್ದೇವೆ, ಹೋಗಿದ್ದ ಕಡೆಗಳಲ್ಲಿ ಜನರ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

Contact Your\'s Advertisement; 9902492681

ಸಂಸದ ಉಮೇಶ್ ಜಾದವ್ ಕಳೆದ ಐದು ವರ್ಷಗಳಲ್ಲಿ ನಮ್ಮ ಬಡ ಸಮಾಜದ ಧ್ವನಿಯಾಗಿ ಕೆಲಸ ನಿರ್ವಹಿಸಿದ್ದಾರೆ. ನಮ್ಮ ಸಮಾಜದ ಗೌರವ ಮಹಾರಾಷ್ಟ್ರದಲ್ಲಿ ಹರಿತ ಕ್ರಾಂತಿಯ ಜನಕ ದಿವಂಗತ ವಸಂತ್ ರಾವ್ ಫುಲಸಿಂಗ್ ನಾಯಕ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ರವರ ನಂತರ ನಮ್ಮ ಬಡ ಸಮಾಜಕ್ಕೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುವ ಯಾರಾದರೂ ಕೆಲಸ ಮಾಡಿದ್ದಾರೆ ಎಂದರೆ ಅದು ಡಾ. ಉಮೇಶ್ ಜಾಧವ್ ಎಂದರು.

ಬಂಜಾರಾ ಸಮಾಜದ ಜನರು ಮತ್ತು ಅವರ ಪರವಾಗಿ ಸಮಾಜದ ಗುರುಗಳು, ನಾಯಕ್, ಡಾವ, ಸಾಣ, ಕಾರ್ಬಾರಿ ಎಲ್ಲರೂ ಕೂಡಿ ಮತ್ತೊಮ್ಮೆ ಮತ್ತೊಮ್ಮೆ ಸಂಸದನಾಗಿ ಆರಿಸಿ ದೆಹಲಿಗೆ ಕಳುಹಿಸಲು ಪಣತೊಟ್ಟಿದ್ದಾರೆ ಮತ್ತು ಅವರು ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಕೇಂದ್ರ ಸಚಿವರಾಗಲಿದ್ದಾರೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here