ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

0
12

ಕಲಬುರಗಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹತ್ತಿಕೊಂಡು ಐವರು ಪ್ರಯಾಣಿಕರು ಕುದಲ್ಲೇಳೆಯಲ್ಲಿ ಪಾರಾಗಿರುವ ಘಟನೆ ಕಮಲಾಪುರ ಪಟ್ಟಣ ಹೊರವಲಯದ ಚಾರಕಮಾನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹೈದರಾಬಾ್ನ ಬಂಜಾರ ಹಿಲ್ಸ್ ನಿವಾಸಿ ಮೊಹಮ್ಮದ್ ಜಲೀಲ್ ಅವರಿಗೆ ಸೇರಿದ್ದ ಫೋರ್ಡ್ ಫೀಸ್ಟಾ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎರಡು ದಿನಗಳ ಹಿಂದೆ ಕಲಬುರಗಿಗೆ ಆಗಮಿಸಿದ್ದ ಇವರು ಚಾಲಕ ಸೇರಿ ಐವರು ಕೂಡಿ ಹೈದರಾಬಾದ್ಗೆ ತೆರಳುತ್ತಿದ್ದರು.

Contact Your\'s Advertisement; 9902492681

ಕಲಬುರಗಿಯ ಮಿಲ್ಲತ್ ನಗರದ ಮೊಹಮ್ಮದ್ ಖದೀರ್ ಪಾಷಾ ಹಾಗೂ ಸಂಗಡಿಗರು ಸೌದಿಗೆ ತೆರಳುತ್ತಿದ್ದು ಅವರನ್ನು ಹೈದರಾಬಾದ್ ವಿಮಾನ ನಿಲ್ದಾಣ ಕರೆದೊಯ್ದು ಬಿಡಬೇಕಿತ್ತು. ಮಾರ್ಗಮಧ್ಯದ ಕಮಲಾಪುರ ಬಳಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಎಲ್ಲರೂ ಕಾರಿನಿಂದ ಕೆಳಗಿಳಿದಿದ್ದಾರೆ. ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here